ಸಂಡೂರು ಎನ್​ಎಂಡಿಸಿ ಬಳಿ ಚಿರತೆ ಪ್ರತ್ಯಕ್ಷ.. ವಿಡಿಯೋ

By

Published : Sep 2, 2022, 3:15 PM IST

thumbnail

ಬಳ್ಳಾರಿ ಜಿಲ್ಲೆಯ ಸಂಡೂರಿನ ಎನ್‌ಎಂಡಿಸಿ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಭಾರಿ ಆತಂಕ ಉಂಟು ಮಾಡಿದೆ. ಜೀಪ್‌ನಲ್ಲಿ ಹೋಗುತ್ತಿರುವವರು ಚಿರತೆಯ ಓಡಾಟವನ್ನು ವಿಡಿಯೋ ಮಾಡಿದ್ದಾರೆ. ಈಗ ಅದು ವೈರಲ್ ಆಗಿದ್ದು, ಚಾರಣಿಗರು, ದ್ವಿಚಕ್ರವಾಹನ ಸವಾರರು ಹುಷಾರಾಗಿ ಓಡಾಡಬೇಕು ಎಂಬ ಸಂದೇಶ ಹರಿದಾಡುತ್ತಿದೆ. ಈ ರೀತಿಯಾಗಿ ಎನ್ಎಂಡಿಸಿ ಹತ್ತಿರದಲ್ಲಿ ಚಿರತೆಗಳು ಹಲವಾರು ಬಾರಿ ಕಾಣಿಸಿಕೊಂಡಿವೆ. ಮಳೆ ಹೆಚ್ಚಾದ ಹಿನ್ನೆಲೆ ಸಂಡೂರು ಸಂಪೂರ್ಣ ಹಸಿರುಮಯವಾಗಿದೆ. ಹೀಗಾಗಿ ನವಿಲು, ಕರಡಿ, ಚಿರತೆ ಸೇರಿದಂತೆ ಸಾಕಷ್ಟು ಪ್ರಾಣಿಗಳು ಹೆಚ್ಚಾಗಿ ಒಡಾಡ್ತಿವೆ ಎನ್ನಲಾಗ್ತಿದೆ. ಗಣಿಗಾರಿಕೆ ಉತ್ತುಂಗದಲ್ಲಿದ್ದಾಗ ಇಲ್ಲಿಂದ ಓಡಿಹೋಗಿದ್ದವು ಎನ್ನುತ್ತಿದ್ದ ಚಿರತೆಗಳು ಇದೀಗ ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದು, ಸಂತತಿ ಹೆಚ್ಚಾಗಿರಬಹುದು ಎನ್ನಲಾಗ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.