ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಚಾಲಕನ ದುಸ್ಸಾಹಸ.. ನೀರಿನ ರಭಸಕ್ಕೆ ಉರುಳಿದ ಸಿಮೆಂಟ್ ಲಾರಿ
ಯಾದಗಿರಿ: ಜಿಲ್ಲೆಯ ಶಹಾಪುರದ ಮದರಕಲ್ ಗ್ರಾಮದ ಹಿರೇಹಳ್ಳ ತುಂಬಿ ಹರಿಯುತ್ತಿದ್ದರೂ ಚಾಲಕನ ದುಸ್ಸಾಹಸಕ್ಕೆ ಮುಂದಾಗಿದ್ದು, ನಿಯಂತ್ರಣ ಕಳೆದುಕೊಂಡ ಸಿಮೆಂಟ್ ಲಾರಿ ನೀರಿಗೆ ಉರುಳಿ ಬಿದ್ದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಹಿರೇಹಳ್ಳದಲ್ಲಿ ನೀರು ಹರಿಯುತ್ತಿತ್ತು. ಲಾರಿಯಲ್ಲಿದ್ದವರು ಟಾಪ್ನಲ್ಲಿ ಕುಳಿತು ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ. ಲಾರಿಯಲ್ಲಿ ಮೂರು ಟನ್ ಸಿಮೆಂಟ್ ಇತ್ತು ಎನ್ನಲಾಗ್ತಿದೆ. ಲಾರಿಯು ಕಲಬುರಗಿಯ ಚಿತ್ತಾಪುರದಿಂದ ಬೆಳಗಾವಿಗೆ ಹೊರಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Last Updated : Aug 27, 2022, 5:21 PM IST