ಸರ್ಕಾರಗಳ ರೈತ ವಿರೋಧಿ ಧೋರಣೆ ಸರಿಯೇ?: ಕಳಸಾ-ಬಂಡೂರಿ ಹೋರಾಟಗಾರರ ಮೇಲಿವೆ ಹಲವು ಪ್ರಕರಣ
ಇಂದು 41ನೇ ರೈತ ಹುತಾತ್ಮ ದಿನ. ಇದಕ್ಕೆ ಕಾರಣ ನವಲಗುಂದ-ನರಗುಂದ ರೈತ ಬಂಡಾಯ. ಈ ಭಾಗದ ಜನರನ್ನು ಭಾವನಾತ್ಮಕವಾಗಿ ಬೆಸೆದಿರುವ ಹೋರಾಟವೇ ಕಳಸಾ ಬಂಡೂರಿ. ಇದಕ್ಕಾಗಿ ಸಾಕಷ್ಟು ರೈತರು ಪ್ರಾಣದ ಹಂಗು ತೊರೆದು ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕದ ರೈತರ ಹಾಗೂ ಸಾರ್ವಜನಿಕರ ಬಹುದೊಡ್ಡ ಹೋರಾಟ ಎಂದೇ ಖ್ಯಾತಿ ಪಡೆದ ಮಹದಾಯಿ ಹೋರಾಟದಲ್ಲಿ ಭಾಗಿಯಾದ ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಸರ್ಕಾರಗಳು ಈವರೆಗೂ ಹಿಂಪಡೆದಿಲ್ಲ.