ಹೈದರಾಬಾದ್ನಿಂದ ಬಂದು ಬಸ್ ನಿಲ್ದಾಣದಲ್ಲಿಯೇ ತಂಗಿದ್ದವರಿಗೆ ಕೊನೆಗೂ ಸಿಕ್ತು ಸ್ಪಂದನೆ
ಗುರುಮಠಕಲ್(ಯಾದಗಿರಿ): ಪಿತ್ರಾರ್ಜಿತ ಆಸ್ತಿ ಪಡೆಯೋ ಸಲುವಾಗಿ ಜಮೀನಿನ ದಾಖಲೆ ಪಡೆಯಲು ಹೈದರಾಬಾದ್ನಿಂದ ಗುರುಮಠಕಲ್ಗೆ ಬಂದ ಬಡ ದಂಪತಿ, ಅರ್ಜಿ ಸಲ್ಲಿಸಿ 16 ದಿನ ಕಳೆದ್ರೂ ನೋ ಯೂಸ್ ಎನ್ನುವಂತಾಗಿತ್ತು. ಅತ್ತ ಊರಿಗೂ ತೆರಳಲಾಗದೇ, 16 ದಿನಗಳ ಕಾಲ ಬಸ್ ನಿಲ್ದಾಣದಲ್ಲಿಯೇ ಇದ್ದು ಪರದಾಟ ನಡೆಸಿದ್ರು. ಕೊನೆಗೂ ತಹಶೀಲ್ದಾರ್ ಶರಣಬಸಪ್ಪ ರಾಣಪ್ಪ ಇವರ ಸಂಕಷ್ಟಕ್ಕೆ ಸ್ಪಂದಿಸಿ, ಊರಿಗೆ ಕಳುಹಿಸಿಕೊಟ್ಟಿದ್ದಾರೆ.