ವಿಪಕ್ಷ ಕುಮಾರವ್ಯಾಸ v/s ಆಡಳಿತ ಕುಮಾರವ್ಯಾಸ.. ಸಿದ್ದರಾಮಯ್ಯ ಹಳೆಗನ್ನಡ ಮೇಷ್ಟ್ರು, ಸಿಎಂ ಬೊಮ್ಮಾಯಿನೂ ಸೂಪರು..
ಸದನದೊಳಗೆ ಸಿದ್ದರಾಮಯ್ಯ ಅಪ್ಪಟ ಹಳೆಗನ್ನಡ ಮೇಷ್ಟ್ರಾಗಿದ್ದರು. ಕುಮಾರವ್ಯಾಸನ ಮಹಾಭಾರತದ ಸಭಾಪರ್ವದ ಪದ್ಯ ಓದುತ್ತಲೇ, ಈ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ವಾಗ್ಬಾಣ ಬಿಟ್ಟಿದ್ದರು. ಸಿಎಂ ಬೊಮ್ಮಾಯಿ ಕೂಡ ಹಿಂದೆ ಬಿದ್ದಿಲ್ಲ. ಹಳೆಗನ್ನಡದ ಕುಮಾರವ್ಯಾಸನ ಪದ್ಯವನ್ನ ಇಟ್ಕೊಂಡೇ ತಮ್ಮ ಸರ್ಕಾರದ ಬೆಲೆ ಏರಿಕೆ ಸಮರ್ಥಿಸಿಕೊಂಡರು. ಜತೆಗೆ ಸಿದ್ದಾರಾಮಯ್ಯರ ಮೇಷ್ಟ್ರಗಿರಿಯನ್ನ ಮೆಚ್ಚಿ ಸಿಎಂ ಬಸವರಾಜ ಬೊಮ್ಮಾಯಿ ಗಮನ ಸೆಳೆದರು.. ಸದನದೊಳಗೆ ಕುಮಾರವ್ಯಾಸ ಪದ್ಯ ವರ್ಸಸ್ ಕುಮಾರವ್ಯಾಸನ ಪದ್ಯ ಹೀಗಿತ್ತು..