ಸಿಲಿಕಾನ್ ಸಿಟಿಯ ಮಗ್ಗುಲಲ್ಲೇ ಆಧ್ಯಾತ್ಮದ ಸೆಲೆ: ಗಮನ ಸೆಳೆಯುತ್ತಿರುವ ಕಲಾವಿದ 'ಏಕತಾರಿ ರಾಮಯ್ಯ' ಕಲೆ
ಬೆಂಗಳೂರು: ಸಿಲಿಕಾನ್ ಸಿಟಿಯ ಕೆಂಗೇರಿ ಹೋಬಳಿಯ ಕೆಂಚನಪಾಳ್ಯದಲ್ಲಿರುವ ಸಾಂಸ್ಕೃತಿಕ ಗುಡಿಸಲೊಂದು ಸಂಗೀತದಿಂದ ತನ್ನತ್ತ ಸೆಳೆಯುತ್ತಿದೆ. ಈ ಗುಡಿಸಿಲಿನಲ್ಲಿ ಏಕತಾರಿ ರಾಮಯ್ಯ ಎಂಬುವವರು ತಂಬೂರಿಗಳು, ಏಕತಾರಿ, ಭಜನೆ, ಭಕ್ತಿಗೀತೆ, ತತ್ವಪದ, ದಾಸರ ಪದದಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಜೀವನ ಯಾತ್ರೆ, ತಂಬೂರಿಯ ವಿಧಗಳು, ಅವರು ಸಿದ್ಧಪಡಿಸುವ ವಿವಿಧ ಪ್ರಕಾರದ ವಾದ್ಯ ಸಲಕರಣೆಗಳ ಬಗ್ಗೆ ನಮ್ಮ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.