ಗ್ಯಾಸ್ ತುಂಬಿಸಿಕೊಳ್ಳುವಾಗ ದಿಢೀರ್ ಕಾಣಿಸಿಕೊಂಡ ಬೆಂಕಿ : ಆಟೋ ಸುಟ್ಟು ಭಸ್ಮ
ಹಾಸನ: ಆಟೋವೊಂದಕ್ಕೆ ಗ್ಯಾಸ್ ತುಂಬುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಆಟೋ ಹಾಗೂ ಮನೆಯೊಂದಕ್ಕೆ ಹಾನಿಯಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಅಗ್ರಹಾರ ಬಡಾವಣೆಯ ಚೆನ್ನಕೇಶವ (29) ಎಂಬ ಆಟೋ ಚಾಲಕ ತಮ್ಮ ಆಟೋಗೆ ಗ್ಯಾಸ್ ತುಂಬಿಸಿಕೊಳ್ಳುವಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಆಟೋ ಬಹುತೇಕ ಸುಟ್ಟಿದೆ. ಮನೆಯೊಂದರ ಮುಂಭಾಗಕ್ಕೆ ಭಾಗಶಃ ಹಾನಿಯಾಗಿದೆ. ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಸ್ಥಳಕ್ಕಾಗಮಿಸಿದ ನಗರ ಠಾಣೆ ಪಿಎಸ್ಐ ಬಸವರಾಜ್ ಚಿಂಚೋಳಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.
TAGGED: