'ರಾಜ್' ಅಂತ ಕರೆಯುತ್ತಿದ್ದವರು ಜಯಂತಿ ಅಮ್ಮ ಒಬ್ಬರೇ: ರಾಘವೇಂದ್ರ ರಾಜ್ಕುಮಾರ್
ನಟಿ ಜಯಂತಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಟ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ತಂದೆಯವರನ್ನು ಎಲ್ಲರೂ ಅಪ್ಪಾಜಿ ಅಂತಾ ಕರೆಯುತ್ತಿದ್ದರು. ಆದರೆ 'ರಾಜ್' ಅಂತ ಕರೆಯುತ್ತಿದ್ದವರು ಜಯಂತಿ ಅಮ್ಮ ಒಬ್ಬರೇ. ಇಂದು ಅವರ ದೇಹವಿಲ್ಲ, ಆದರೆ ಪ್ರತಿಯೊಂದು ಸಿನಿಮಾನೂ ಬದುಕಿರುತ್ತದೆ. ನಮ್ಮ ಕುಟುಂಬಕ್ಕೆ ತುಂಬಾ ಬೇಕಾದವರು ಎಂದು ತಿಳಿಸಿದರು. ಇದೇ ವೇಳೆ ವಾಟಾಳ್ ನಾಗರಾಜ್, ಸಚಿವ ವಿ.ಸೋಮಣ್ಣ ಸಹ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.