ಮಂಗಳೂರಿನ ಈ ಪದವಿ ವಿದ್ಯಾರ್ಥಿನಿಗೆ ಹಾವುಗಳೆಂದರೆ ಪ್ರೀತಿ.. ಉರಗ ಅಪಾಯದಲ್ಲಿದ್ದರೆ ರಕ್ಷಕಿ!
ಮಂಗಳೂರು: ಹೆಸರು ಶರಣ್ಯಾ ಭಟ್. ಮಂಗಳೂರಿನ ಅಶೋಕನಗರದ ನಿವಾಸಿ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ. ಹಾವುಗಳ ಬಗ್ಗೆ ಅಧ್ಯಯನ ಮತ್ತು ಅವುಗಳು ಎಲ್ಲಾದರೂ ಕಂಡರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಕೆಲಸ ಮಾಡ್ತಿದ್ದಾರೆ.