ಹೈದರಾಬಾದ್ನ ಖೈರತಾಬಾದ್ ಗಣಪತಿ ನಿಮಜ್ಜನದಲ್ಲಿ ಸಾವಿರಾರು ಭಕ್ತರು.. ಕೋವಿಡ್ ನಿಯಮ ಮಾಯ..
ಕೊರೊನಾ ಒಂದು ಮತ್ತು ಎರಡನೇ ಅಲೆಗೆ ಕಂಗೆಟ್ಟ ಜನ ಕೋವಿಡ್ ಮೂರನೇ ಅಲೆ ಆತಂಕದಲ್ಲಿದ್ದಾರೆ. ಈ ಮಧ್ಯೆ ತೆಲಂಗಾಣದ ಹೈದರಾಬಾದ್ನ ಖೈರತಾಬಾದ್ ಗಣಪತಿ ನಿಮಜ್ಜನ ಮೆರವಣಿಗೆಯಲ್ಲಿ ಸಾವಿರಾರು ಜನ ಕೋವಿಡ್ ನಿಯಮ ಮರೆತು ಭಾಗಿಯಾಗಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಎಲ್ಲವೂ ಮಾಯವಾಗಿದೆ. ಕೊರೊನಾ ಹರಡುವ ಭೀತಿಗೆ ಕಾರಣವಾಗಿದೆ. ಭಾನುವಾರ ಮುಂಜಾನೆ 40 ಅಡಿ ಎತ್ತರದ ಖೈರತಾಬಾದ್ ಗಣೇಶನ ನಿಮಜ್ಜನ ಮೆರವಣಿಗೆ ನಡೆಯಿತು. ಈ ವೇಳೆ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, 20,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.