ಅರ್ಜುನ್​ ಪ್ರಶಸ್ತಿ ಸ್ವೀಕರಿಸಿದ ಕನ್ನಡಿಗ ಸುಹಾಸ್​ ಯತಿರಾಜ್​, ಕ್ರಿಕೆಟಿಗ ಶಿಖರ್ ಧವನ್​

By

Published : Nov 13, 2021, 7:28 PM IST

thumbnail

ನವದೆಹಲಿ : ಪ್ಯಾರಾಲಿಂಪಿಕ್ಸ್(Paralympics)​​​ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ ಐಎಎಸ್​​ ಅಧಿಕಾರಿ ಸುಹಾಸ್ ಯತಿರಾಜ್( IAS officer Suhas Yathiraj)​ ಇಂದು ಅರ್ಜುನ್​ ಪ್ರಶಸ್ತಿ(Arjun Award) ಸ್ವೀಕಾರ ಮಾಡಿದರು. ಪ್ಯಾರಾಲಿಂಪಿಕ್ಸ್​ನ(Para badminton) ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್​​ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸುಹಾಸ್(suhas yathiraj)​​ ಮೂಲತಃ ಹಾಸನದವರಾದ್ರೂ ಹುಟ್ಟಿ ಬೆಳೆದಿರುವುದು ಮಾತ್ರ ಶಿವಮೊಗ್ಗದಲ್ಲಿ. 38 ವರ್ಷದ ಸುಹಾಸ್​ ಸದ್ಯ ಉತ್ತರ ಪ್ರದೇಶದ ಗೌತಮ್​ ಬುದ್ಧ ನಗರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್​​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟೀಂ ಇಂಡಿಯಾದ ಆರಂಭಿಕ ಎಡಗೈ ಬ್ಯಾಟರ್ ಶಿಖರ್​ ಧವನ್(Shikhar Dhawan ) ಕೂಡ ಅರ್ಜುನ್ ಪ್ರಶಸ್ತಿ ಸ್ವೀಕಾರ ಮಾಡಿದರು. ಭಾರತೀಯ ಕ್ರಿಕೆಟ್​(Indian Cricket)ನಲ್ಲಿ ವಿಭಿನ್ನವಾದ ಛಾಪು ಮೂಡಿಸಿರುವ ಗಬ್ಬರ್ ಸಿಂಗ್​ ಮಹತ್ವದ ಪಂದ್ಯಗಳಲ್ಲಿ ಭಾರತಕ್ಕೆ ಜಯದ ಕಾಣಿಕೆ ನೀಡಿದ್ದಾರೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.