ಗುರುಮಠಕಲ್(ಯಾದಗಿರಿ): ಪಿತ್ರಾರ್ಜಿತ ಆಸ್ತಿ ಪತ್ರ ಪಡೆಯಲು ಕಳೆದ ಕೆಲವು ದಿನಗಳಿಂದ ಬಸ್ ನಿಲ್ದಾಣದಲ್ಲಿಯೇ ತಂಗಿದ್ದ ದಂಪತಿ ಸಂಕಷ್ಟಕ್ಕೆ ತಾಲೂಕು ತಹಶೀಲ್ದಾರ್ ಶರಣಬಸಪ್ಪ ರಾಣಪ್ಪ ಸ್ಪಂದಿಸಿದ್ದಾರೆ.
ಆಸ್ತಿ ಪತ್ರಕ್ಕಾಗಿ ಕುಟುಂಬವೊಂದು ಇದೇ ತಿಂಗಳ 6ರಂದು ಹೈದರಾಬಾದ್ನಿಂದ ಗುರುಮಠಕಲ್ಗೆ ಆಗಮಿಸಿತ್ತು. ಆಸ್ತಿ ಸಂಬಂಧ ಅರ್ಜಿ ಸಲ್ಲಿಸಿ 16 ದಿನಗಳಾದರೂ ಕಂದಾಯ ಅಧಿಕಾರಿಗಳು ಮೂಲ ನಕಲು ಪ್ರತಿ ನೀಡಿರಲಿಲ್ಲ. ಹೀಗಾಗಿ, ದಂಪತಿ ನಗರದ ಬಸ್ ನಿಲ್ದಾಣದಲ್ಲಿಯೇ ವಾಸವಾಗಿದ್ದರು.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತಹಶೀಲ್ದಾರ್ ಅವರು ದಂಪತಿಯನ್ನು ಕರೆಸಿ ವಿಷಯ ಆಲಿಸಿದ್ದಾರೆ. ನಂತರ ಅರ್ಜಿ ಸಲ್ಲಿಸಿದ್ದ ಜಮೀನಿನ ದಾಖಲೆಗಳನ್ನು ನೀಡಿ ಊರಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಅರ್ಜಿ ಸಲ್ಲಿಸಿ 16 ದಿನಗಳೇ ಕಳೆದವು: ಹೈದರಾಬಾದ್ನಿಂದ ಬಂದು ಬಸ್ ನಿಲ್ದಾಣದಲ್ಲಿಯೇ ತಂಗಿದ ಕುಟುಂಬ