ಗುರುಮಠಕಲ್(ಯಾದಗಿರಿ): ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಪಟ್ಟಣದ ರಸ್ತೆಗಳು ನದಿಯಂತಾಗಿವೆ. ಕಾಕಲವಾರ ಕ್ರಾಸ್ನಿಂದ ಬಸ್ ನಿಲ್ದಾಣ ರಸ್ತೆ, ಸಿಹಿನೀರಿನ ವೃತ್ತ, ಸೇರಿದಂತೆ ಹಲವು ಕಡೆ ಮಳೆಯ ನೀರು ಹಳ್ಳದಂತೆ ಉಕ್ಕಿ ಹರಿದಿವೆ. ಬಹಳ ವರ್ಷಗಳ ನಂತರ ಸುರಿದ ಭಾರೀ ಮಳೆಗೆ ಪ್ರಸಿದ್ಧ ದಬದಬೆ ಜಲಪಾತ ಕೂಡ ಭೋರ್ಗರೆದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಗುರುಮಠಕಲ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೆರೆ ತುಂಬಿ ಹರಿಯುತ್ತಿದ್ದು ರಸ್ತೆಗಳೆಲ್ಲ ನದಿಗಳಂತೆ ಕಾಣುತ್ತಿವೆ. ನೀರು ರಸ್ತೆಗೆ ಬಂದ ಕಾರಣ ಬಸ್ಸುಗಳ ಸಂಚಾರವೂ ಸ್ಥಗಿತವಾಗಿದೆ. ಅಂಗಡಿಗಳಿಗೂ ನೀರು ನುಗ್ಗಿದ್ದು, ತುಂಬಿ ಹರಿಯುತ್ತಿರುವ ರಸ್ತೆಗಳಲ್ಲಿ ಜನರು ಓಡಾಡಲೂ ಭಯಪಡುವಂತಾಗಿದೆ.
ಇದನ್ನೂ ಓದಿ : ಮುದ್ದೇಬಿಹಾಳದಲ್ಲಿ ಭಾರಿ ಮಳೆ ಅಂಗಡಿ, ಮನೆಗಳಿಗೆ ನುಗ್ಗಿದ ನೀರು