ಯಾದಗಿರಿ: ಕೆಎಸ್ಆರ್ಟಿಸಿ ಬಸ್ನಲ್ಲಿ ಯಾದಗಿರಿಯಿಂದ ಸೇಡಂಗೆ ತೆರಳುತ್ತಿದ್ದ ಪ್ರಯಾಣಿಕರೊಬ್ಬರ ಜೊತೆಗೆ ಇದ್ದ ಮೇಕೆ ಮರಿಗಳಿಗೂ ಕಂಡಕ್ಟರ್ ಫುಲ್ ಟಿಕೆಟ್ ನೀಡಿದ ಪ್ರಸಂಗ ಜಿಲ್ಲೆಯಲ್ಲಿ ಜರುಗಿದೆ.
ರೈತರಾದ ಸುನೀಲ್ ಹಾಗೂ ರಾಮಲಿಂಗ ತಮ್ಮ ಮೇಕೆ ಮರಿಗಳನ್ನು ಯಾದಗಿರಿಯಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮಕ್ಕೆ ಬಸ್ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಂಡಕ್ಟರ್ ಎರಡು ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿದ್ದಾನೆ.
ಕಂಡಕ್ಟರ್ ಬಳಿ ಮೇಕೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದರೂ 'ನಿಯಮವಿದೆ' ಎಂದು ಹೇಳಿದ್ದರಿಂದ ರೈತರು ತಮ್ಮ ಮೇಕೆಗಳಿಗೂ ಫುಲ್ ಟಿಕೆಟ್ಗೆ ಹಣ ಪಾವತಿ ಮಾಡಬೇಕಾಯಿತು.
ಕೆಎಸ್ಆರ್ಟಿಸಿ (KSRTC) ಬಸ್ನಲ್ಲಿ ಸಾಕು ಪ್ರಾಣಿ, ಪಕ್ಷಿಗಳನ್ನು ಕರೆದೊಯ್ಯಬೇಕಾದರೆ ಪ್ರಯಾಣಿಕರಂತೆ ಪ್ರಾಣಿಗಳಿಗೂ ಟಿಕೆಟ್ ಪಡೆಯಲೇಬೇಕು ಎಂಬ ನಿಯಮವಿದೆ.