ವಿಜಯಪುರ: ಗುಮ್ಮಟ ನಗರಿಯ 17 ವರ್ಷದ ಬಾಲಕನೋರ್ವ ತಾನು ದುಡಿದ ಹಣದಲ್ಲಿ ಥರ್ಮಾಕೋಲ್ನಿಂದ ರಾಮ ಮಂದಿರ ನಿರ್ಮಿಸಿ ಮುಖ್ಯದ್ವಾರದ ಮೇಲೆ ಶ್ರೀರಾಮ ವೇಷಧಾರಿ ಗಣೇಶನ ಮಾದರಿ ಪ್ರತಿಷ್ಠಾಪಿಸಿ ಎಲ್ಲರ ಗಮನ ಸೆಳೆದಿದ್ದಾನೆ.
ಪ್ರತಿ ವರ್ಷ ವಿಠ್ಠಲ ಗಜಾನನ ಮಂಡಳಿ ವಿಜಯಪುರದ ಖಾಜಾಮಿನ ಜೈಲ್ ದರ್ಗಾದ ವಿಠ್ಠಲ ಮಂದಿರದಲ್ಲಿ ವಿನೂತನವಾಗಿ ಮೂರ್ತಿ ಪ್ರತಿಷ್ಠಾಪಿಸುತ್ತಿತ್ತು. ಆದರೆ ಈ ಬಾರಿ ಟ್ರೈಲರಿಂಗ್ ವೃತ್ತಿ ಮಾಡಿದ್ದ 17 ವರ್ಷದ ಬಾಲಕ ಶಂಕರ ಸುರೇಶ ಪೂಜಾರ ಎಂಬುವನು ಗಣೇಶ ಪ್ರತಿಷ್ಠಾಪನೆಗೆ ಅಯೋಧ್ಯೆ ಮಂದಿರ ಮಾದರಿ ನಿರ್ಮಿಸುವುದಾಗಿ ಹಿರಿಯರ ಅಪ್ಪಣೆ ಪಡೆದಿದ್ದ. ಕಳೆದ ಮೂರು ತಿಂಗಳಿಂದ ಬಟ್ಟೆ ಹೊಲಿದ ಹಣ ಜೋಡಿಸಿ ಥರ್ಮಾಕೋಲ್ ತಂದು ಮನೆಯಲ್ಲಿ 5 ಅಡಿ ಎತ್ತರ ಹಾಗೂ 7 ಅಡಿ ಅಗಲವುಳ್ಳ ರಾಮ ಮಂದಿರ ನಿರ್ಮಿಸಿದ್ದಾನೆ.
ಇದಕ್ಕೆ 3 ಸಾವಿರರೂ. ಖರ್ಚು ಮಾಡಿದ್ದಾನೆ. ಇದರ ಜತೆ ಇತನ ಸಹೋದರ ಅಲ್ಪಸ್ಪಲ್ಪ ಸಹಾಯ ಮಾಡಿದ್ದಾನೆ. ಇವರ ತಂದೆ ಸುರೇಶ ಓರ್ವ ಕಲಾವಿದ. ಶಿವಾಜಿ ಸರ್ಕಲ್ನಲ್ಲಿರುವ ಶಿವಾಜಿ ಪ್ರತಿಮೆ ತಯಾರಿಸಲು ಇವರದ್ದು ಅಲ್ಪ ಕಾಣಿಕೆ ಇದೆ. ಸದ್ಯ ಈ ರಾಮ ಮಂದಿರ ನೋಡಲು ದೂರ ಕಡೆಯಿಂದ ಜನರು ಬರುತ್ತಿರುವುದು ವಿಶೇಷ.