ಲೋಕಾಯುಕ್ತರಿಂದ ಭ್ರಷ್ಟರ ಬೇಟೆ: ಬಲೆಗೆ ಬಿದ್ದ ವಿಜಯಪುರ ಎಪಿಎಂಸಿ ಅಧಿಕಾರಿ

author img

By

Published : Dec 2, 2022, 10:20 AM IST

Vijayapur APMC Internal Auditor

ಲಂಚಕ್ಕೆ ಬೇಡಿಕೆ: ವಿಜಯಪುರ ಎಪಿಎಂಸಿ ಆಂತರಿಕ ಲೆಕ್ಕಪರಿಶೋಧಕ ಶಂಕರಯ್ಯ ಹಿರೇಮಠ ಲೋಕಾಯುಕ್ತ ಬಲೆಗೆ.

ವಿಜಯಪುರ: ಇಲ್ಲಿನ ಎಪಿಎಂಸಿ ಆಂತರಿಕ ಲೆಕ್ಕಪರಿಶೋಧಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಂಕರಯ್ಯ ಹಿರೇಮಠ ಬಂಧಿತ ಆರೋಪಿ. ಇವರು ಎಪಿಎಂಸಿಯಲ್ಲಿ ವ್ಯಾಪಾರ ಮಾಡಲು ಟ್ರೇಡಿಂಗ್ ಲೈಸೆನ್ಸ್ ನೀಡಲು 5 ಸಾವಿರ ರೂ.ಲಂಚಕ್ಕೆ ಕೈ ಚಾಚಿದ್ದಾರೆ. ಲಂಚ‌ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ‌ ಎಸ್​ಪಿ ಅನೀತಾ ಹದ್ದನ್ನವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಹೆಚ್ಚುವರಿಯಾಗಿ ಸಿಕ್ಕ 39 ಸಾವಿರ ರೂ ಹಣವನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಲಂಚ ಪಡೆಯುತ್ತಿದ್ದ ಪಿಡಿಒ ಲೋಕಾಯುಕ್ತ ಬಲೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.