ವಿಜಯಪುರ : ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ ಮಹಿಳೆಯರ ಹೊಡೆದಾಟ

author img

By

Published : Sep 15, 2021, 3:47 PM IST

Updated : Sep 15, 2021, 3:55 PM IST

ಕ್ಷುಲಕ ಕಾರಣಕ್ಕೆ ಮಹಿಳೆಯರಿಂದ ನಡುರಸ್ತೆಯಲ್ಲೇ ಮಾರಾಮಾರಿ

ಈ ಜಗಳ ಮನೆ ಜಾಗಕ್ಕಾಗಿ ನಡೆದಿದ್ದು, ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಸಾಜಾದ್‌ಬೀ ಗೋಟ್ಯಾಳ್ ಸೇರಿ ಇತರೆ ಮಹಿಳೆಯರಿಂದ ಹಲ್ಲೆ‌ ನಡೆದಿದೆ ಎಂದು ದೂರಲಾಗಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ..

ವಿಜಯಪುರ : ಕ್ಷುಲ್ಲಕ ಕಾರಣಕ್ಕೆ ನಾಲ್ವರು ಮಹಿಳೆಯರು ನಡುರಸ್ತೆಯಲ್ಲೇ ಜಡೆ ಹಿಡಿದು ಗಲಾಟೆ ಮಾಡಿದ ಘಟನೆ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋವನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ನಡುರಸ್ತೆಯಲ್ಲೇ ಮಹಿಳೆಯರ ಹೊಡೆದಾಟ

ಮೂವರು ಮಹಿಳೆಯರು ಒಬ್ಬ ಮಹಿಳೆಯನ್ನು ಎಳೆದಾಡಿ ಹೊಡೆಯುವ ದೃಶ್ಯವಿದೆ. ಆ ಮಹಿಳೆ ಅದೇ ಗ್ರಾಮದ ಶರಣಮ್ಮ ಬಂದಾಳ ಎನ್ನಲಾಗಿದೆ. ಮೂವರು ಮಹಿಳೆಯರು ಶರಣಮ್ಮನ ಮೇಲೆ ಹಲ್ಲೆ ಮಾಡಿದ್ದಾರೆ.

ಈ ಜಗಳ ಮನೆ ಜಾಗಕ್ಕಾಗಿ ನಡೆದಿದ್ದು, ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಸಾಜಾದ್‌ಬೀ ಗೋಟ್ಯಾಳ್ ಸೇರಿ ಇತರೆ ಮಹಿಳೆಯರಿಂದ ಹಲ್ಲೆ‌ ನಡೆದಿದೆ ಎಂದು ದೂರಲಾಗಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Last Updated :Sep 15, 2021, 3:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.