ಒಂದೇ ಒಂದು ಪೋನ್ ಕರೆಗೆ ಐಪಿಎಸ್ಗೆ ಬಡ್ತಿ: ಯತ್ನಾಳ್
Updated on: Dec 5, 2022, 6:38 PM IST

ಒಂದೇ ಒಂದು ಪೋನ್ ಕರೆಗೆ ಐಪಿಎಸ್ಗೆ ಬಡ್ತಿ: ಯತ್ನಾಳ್
Updated on: Dec 5, 2022, 6:38 PM IST
ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಫೋನ್ ಮಾಡಿದ ಕಾರಣ ಪೊಲೀಸ್ ಅಧಿಕಾರಿ ಐಪಿಎಸ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಜಯಪುರ: ಒಬ್ಬ ಪೊಲೀಸ್ ಅಧಿಕಾರಿಗೆ 6 ತಿಂಗಳ ಹಿಂದೆಯೇ ಐಪಿಎಸ್ ಬಡ್ತಿ ಹೊಂದಬೇಕಾಗಿತ್ತು. ಐಪಿಎಸ್ ಬಡ್ತಿ ನೀಡದೇ ಅವರನ್ನು ಸತಾಯಿಸಲಾಗುತ್ತಿತ್ತು. ಈ ವಿಷಯ ತಿಳಿದು ನಾನು ಫೋನ್ ಮಾಡಿ ಹೇಳಿದ ಮೇಲೆ ಗೃಹ ಸಚಿವರು ತಕ್ಷಣವೇ ಫೈಲ್ ಕ್ಲಿಯರ್ ಮಾಡಿದರು ಎಂದು ಬಸವನಗೌಡ ಪಾಟಿಲ್ ಯತ್ನಾಳ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಡೆದ ಪಂಚಮಸಾಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಬಹಳ ಜನ ಪ್ರಯತ್ನ ನಡೆಸಿದ್ದರು. ಆದರೆ, ಅದು ಅವರಿಂದ ಸಾಧ್ಯವಾಗಲಿಲ್ಲ ಎಂದು ರಾಜಕೀಯ ವಿರೋಧಿಗಳಿಗೆ ಟಾಂಗ್ ಸಹ ನೀಡಿದರು.
ಜನ ಅಭಿವೃದ್ಧಿ ನೋಡಿ ವೋಟ್ ಹಾಕಿದರು: ನೀವು ರಾಜಕೀಯ ಏನೇ ಮಾಡಿದರು, ಉತ್ತಮ ರಸ್ತೆ, ಕುಡಿಯುವ ನೀರಿನ ಸೌಲಭ್ಯ ನೀಡಿದ್ದೀರಿ ಎನ್ನುವ ಕಾರಣ ಜನ ಬೆಂಬಲಿಸಿ ಮತವನ್ನು ನೀಡುತ್ತಾರೆ ಎಂದು ಹೇಳಿದರು
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನು ಕರ್ನಾಟಕಕ್ಕೆ ಬರಲು ಬಿಡುವುದಿಲ್ಲ: ಸಚಿವ ಆರ್.ಅಶೋಕ್
