ಮದುವೆಯಾಗಿ ಕೇವಲ 22ನೇ ದಿನಕ್ಕೆ ಯುವ ಪತ್ರಕರ್ತ ದಂಪತಿ ಆತ್ಮಹತ್ಯೆಗೆ ಶರಣು!

author img

By

Published : Nov 28, 2022, 7:21 AM IST

Newly married couple committed suicide  couple committed suicide in Vijayapura  reporter family died  ಯುವ ಪತ್ರಕರ್ತನ ದಂಪತಿ ಆತ್ಮಹತ್ಯೆಗೆ ಶರಣು  ಯುವ ಪತ್ರಕರ್ತನ ದಂಪತಿ ಆತ್ಮಹತ್ಯೆ  ಪ್ರತಿನಿಧಿ ಮತ್ತು ಕ್ಯಾಮರಾಮೆನ್ ಆಗಿ ಕೆಲಸ

ಮದುವೆಯಾಗಿ ಕೇವಲ 22ನೇ ದಿನಕ್ಕೆ ಯುವ ಪತ್ರಕರ್ತ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದೆ.

ಮುದ್ದೇಬಿಹಾಳ, ವಿಜಯಪುರ : ಪಟ್ಟಣದ ಎಪಿಎಂಸಿ ಪಕ್ಕದ ಮುಖ್ಯ ರಸ್ತೆಯಲ್ಲಿರುವ ಮುರಾಳ ಅವರ ಕಟ್ಟಡದಲ್ಲಿ ಯುವ ಪತ್ರಕರ್ತ ದಂಪತಿ ವಾಸವಾಗಿದ್ದರು. ಕಳೆದ ರಾತ್ರಿ 10ರ ಸುಮಾರು ಯುವ ಪತ್ರಕರ್ತ ಹಾಗೂ ಆತನ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

Newly married couple committed suicide  couple committed suicide in Vijayapura  reporter family died  ಯುವ ಪತ್ರಕರ್ತನ ದಂಪತಿ ಆತ್ಮಹತ್ಯೆಗೆ ಶರಣು  ಯುವ ಪತ್ರಕರ್ತನ ದಂಪತಿ ಆತ್ಮಹತ್ಯೆ  ಪ್ರತಿನಿಧಿ ಮತ್ತು ಕ್ಯಾಮರಾಮೆನ್ ಆಗಿ ಕೆಲಸ
ಪತ್ರಕರ್ತ ತಿಪ್ಪಣ್ಣ ಸಿದ್ದಪ್ಪ ಹೊಸಮನಿ

ಮೃತರು ಮುದ್ದೇಬಿಹಾಳ ತಾಲೂಕಿನ ಕೊಣ್ಣೂರ ಗ್ರಾಮದ ತಿಪ್ಪಣ್ಣ ಸಿದ್ದಪ್ಪ ಹೊಸಮನಿ (34) ಮತ್ತು ಆತನ ಪತ್ನಿ ಸುಶೀಲಾಬಾಯಿ (30) ಎಂದು ಗುರುತಿಸಲಾಗಿದೆ. ತಿಪ್ಪಣ್ಣ ಖಾಸಗಿ ಮಾಧ್ಯಮವೊಂದರಲ್ಲಿ ಪ್ರತಿನಿಧಿ ಮತ್ತು ಕ್ಯಾಮರಾಮೆನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

Newly married couple committed suicide  couple committed suicide in Vijayapura  reporter family died  ಯುವ ಪತ್ರಕರ್ತನ ದಂಪತಿ ಆತ್ಮಹತ್ಯೆಗೆ ಶರಣು  ಯುವ ಪತ್ರಕರ್ತನ ದಂಪತಿ ಆತ್ಮಹತ್ಯೆ  ಪ್ರತಿನಿಧಿ ಮತ್ತು ಕ್ಯಾಮರಾಮೆನ್ ಆಗಿ ಕೆಲಸ
ಪತ್ರಕರ್ತನ ಪತ್ನಿ ಸುಶೀಲಬಾಯಿ

ಇದೇ ನವೆಂಬರ್ 5 ರಂದು ತಿಪ್ಪಣ್ಣ ಮತ್ತು ಸುಶೀಲಾಬಾಯಿ ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು ಎನ್ನಲಾಗಿದೆ. ಪತಿ‌ - ಪತ್ನಿ ಇಬ್ಬರೂ ಅನೋನ್ಯವಾಗಿಯೇ ಸಂಸಾರ ನಡೆಸುತ್ತಿದ್ದರು. ಏಕಾಏಕೀ ನೇಣಿಗೆ ಶರಣಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಘಟನೆಯ ಪೂರ್ತಿ ಮಾಹಿತಿ ಪೊಲೀಸ್ ತನಿಖೆಯಿಂದ ಮಾತ್ರವೇ ಹೊರಬರಲಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಆರೀಫ್ ಮುಶಾಪುರಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ: ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.