ಮೈಸೂರು ದೇವಸ್ಥಾನ ತೆರವು ವಿಚಾರ: ಸುಪ್ರೀಂಕೋರ್ಟ್ ಆದೇಶ ಕೇವಲ ಹಿಂದೂಗಳಿಗೆ ಮಾತ್ರವೇ?:ಶಾಸಕ ಯತ್ನಾಳ

author img

By

Published : Sep 12, 2021, 7:05 PM IST

ಬಸನಗೌಡ ಪಾಟೀಲ ಯತ್ನಾಳ ಫೇಸ್ ಬುಕ್ ಪೋಸ್ಟ್

ಮೈಸೂರು ಜಿಲ್ಲೆಯಲ್ಲಿ ದೇವಸ್ಥಾನ ತೆರವು ವಿಚಾರವಾಗಿ ಫೇಸ್‌ಬುಕ್ ಪೋಸ್ಟ್ ಮಾಡಿರುವ ಯತ್ನಾಳ, ಸುಪ್ರೀಂಕೋರ್ಟ್ ಆದೇಶ ಕೇವಲ ಹಿಂದೂಗಳಿಗೆ ಮಾತ್ರವೇ? ಎಂದು ಮೈಸೂರು ಜಿಲ್ಲಾಧಿಕಾರಿ ಉತ್ತರಿಸಬೇಕು ಎಂದು ಪೋಸ್ಟ್ ಮಾಡಿದ್ದಾರೆ.

ವಿಜಯಪುರ: ಮೈಸೂರು ಜಿಲ್ಲೆಯಲ್ಲಿ ದೇವಸ್ಥಾನ ತೆರವು ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನು ನೆಪ ಮಾಡಿಕೊಂಡು ಹಿಂದು ದೇವಾಲಯ ಧ್ವಂಸ ಸರಿಯಲ್ಲ ಎಂದು ಯತ್ನಾಳ ಕಿಡಿಕಾರಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ ಫೇಸ್ ಬುಕ್ ಪೋಸ್ಟ್
ಬಸನಗೌಡ ಪಾಟೀಲ ಯತ್ನಾಳ ಫೇಸ್ ಬುಕ್ ಪೋಸ್ಟ್

ಹಿಂದು ದೇವಾಲಯಗಳನ್ನು ಧ್ವಂಸ ಮಾಡುವ ಹುನ್ನಾರವನ್ನು ನಾವು ಖಂಡಿಸುತ್ತೇವೆ. ಕೋರ್ಟ್ ಆದೇಶವನ್ನು ತಮಗೆ ಬೇಕಾದ ಹಾಗೇ ತಿರುಚಿ ಹಿಂದುಗಳ ಶ್ರದ್ಧಾಕೇಂದ್ರಕ್ಕೆ ಕೈ ಹಾಕುವುದನ್ನು ಬಿಡಬೇಕು. ಪ್ರಾರ್ಥನಾ ಮಂದಿರಗಳಿಗೂ ದೇವಸ್ಥಾನಗಳಿಗೂ ಬಹಳ ವ್ಯತ್ಯಾಸವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ವಿಧಾನ ಮಂಡಲ ಅಧಿವೇಶನ; ಪ್ರತಿಪಕ್ಷಗಳ ಅಸ್ತ್ರ ಎದುರಿಸಲು ಬೊಮ್ಮಾಯಿ ಸನ್ನದ್ಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.