ಕಾರವಾರ: ಕೆಮಿಕಲ್ ತುಂಬಿದ್ದ ಟ್ಯಾಂಕರ್​ ಸ್ಫೋಟ ಶಂಕೆ, ಆತಂಕ ಸೃಷ್ಟಿಸಿದ ಬೆಂಕಿಯ ಕೆನ್ನಾಲಿಗೆ

author img

By

Published : Oct 13, 2021, 8:45 AM IST

Updated : Oct 13, 2021, 12:30 PM IST

tanker-got-fire-after-engaged-in-accident-in-uttara-kannada

ಇಂದು ಬೆಳಗ್ಗೆ ಸುಮಾರು 5.30ರ ವೇಳೆಗೆ ಕೆಮಿಕಲ್ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಪರಿಣಾಮ, ಆರ್ತಿಬೈಲ್ ಕ್ರಾಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದಾರೆ.

ಕಾರವಾರ (ಉತ್ತರ ಕನ್ನಡ): ಕೆಮಿಕಲ್‌ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡು ಅಪಾರ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಯಲ್ಲಾಪುರ ಇಡಗುಂದಿಯ ಆರ್ತಿಬೈಲ್ ಕ್ರಾಸ್ ಬಳಿ ಮುಂಜಾನೆ ನಡೆದಿದೆ.

ಕೆಮಿಕಲ್ ತುಂಬಿದ್ದ ಟ್ಯಾಂಕರ್​ ಸ್ಫೋಟ ಶಂಕೆ

ಕೆಮಿಕಲ್ ಟ್ಯಾಂಕರ್ ಸ್ಫೋಟಗೊಂಡಿದೆ ಎನ್ನಲಾಗುತ್ತಿದ್ದರೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡ ಕಾರಣ ತಕ್ಷಣ ಏನಾಗಿದೆ ಅನ್ನೋ ಮಾಹಿತಿ ಸಿಗದೇ ಅಧಿಕಾರಿಗಳು ಕೂಡ ಗೊಂದಲದಲ್ಲಿದ್ದಾರೆ.

tanker-got-fire-after-engaged-in-accident-in-uttara-kannada
ಟ್ಯಾಂಕರ್​​​​ನಿಂದ ಸೋರಿಕೆಯಾದ ಕೆಮಿಕಲ್​ನಿಂದ ಹೊತ್ತಿದ ಬೆಂಕಿ

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರು ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Last Updated :Oct 13, 2021, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.