ಮಧ್ವಾಚಾರ್ಯರ ಜಯಂತಿ ಆಚರಣೆಗೆ ಪಲಿಮಾರು ಶ್ರೀ ಒತ್ತಾಯ

author img

By

Published : Oct 16, 2021, 4:52 AM IST

Updated : Oct 16, 2021, 6:51 AM IST

palimaru-shri-insists-on-madhvacharya-jayanti-celebration

ಸರ್ಕಾರವು ಅನೇಕ ಮಹಾತ್ಮರ ಜಯಂತಿ, ಪುಣ್ಯತಿಥಿಗಳನ್ನು ಆಚರಿಸುವಂತೆ ಮಧ್ವ ಜಯಂತಿಯನ್ನೂ ಆಚರಿಸಬೇಕು ಎಂದು ಉಡುಪಿಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಗ್ರಹಿಸಿದ್ದಾರೆ.

ಉಡುಪಿ: ಕರ್ನಾಟಕದಲ್ಲಿ ಅವತರಿಸಿದ ಮಹಾನ್​ ದಾರ್ಶನಿಕರಾದ ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಸರ್ಕಾರವೇ ಆಚರಿಸಲಿ ಎಂದು ಪಲಿಮಾರು ಮಠಾಧೀಶರು ಒತ್ತಾಯಿಸಿದ್ದಾರೆ.

ಭಾರತದಲ್ಲಿ ಅವತರಿಸಿದ ಅನೇಕ ದಾರ್ಶನಿಕರಲ್ಲಿ ಅದರಲ್ಲೂ ಆಚಾರ್ಯತ್ರಯರಲ್ಲಿ ಶ್ರೀ ಮಧ್ವಾಚಾರ್ಯರು ಪ್ರಮುಖರು. ಸರಳ ಭಕ್ತಿ ಸಿದ್ಧಾಂತವನ್ನು ಪ್ರತಿಪಾದಿಸಿ, ಕನ್ನಡದ ನೆಲದಲ್ಲಿ ಹರಿದಾಸ ಸಾಹಿತ್ಯ ಸಮೃದ್ಧವಾಗಿ ಬೆಳೆಯಲು ಮೂಲ ಕಾರಣರವರು. ಇದಲ್ಲದೆ ಉಡುಪಿಯಲ್ಲಿ ಶ್ರೀ ಕೃಷ್ಣನನ್ನು ಪ್ರತಿಷ್ಠಾಪಿಸುವ ಮೂಲಕ ನಾಡಿನ ಕೀರ್ತಿಯನ್ನು ಬೆಳಗಿದವರು ಜಗದ್ಗುರು ಶ್ರೀ ಮಧ್ವಾಚಾರ್ಯರು. ಇಂತಹ ಮಹನೀಯರ ಜಯಂತಿಯನ್ನು ಸರ್ಕಾರ ಆಚರಿಸುವಂತಾಗಬೇಕು ಎಂದು ಶ್ರೀಗಳು ಹೇಳಿದ್ದಾರೆ.

ಮಧ್ವಾಚಾರ್ಯರ ಜಯಂತಿ ಆಚರಣೆಗೆ ಪಲಿಮಾರು ಶ್ರೀ ಒತ್ತಾಯ

ಸರ್ಕಾರವು ಅನೇಕ ಮಹಾತ್ಮರ ಜಯಂತಿ, ಪುಣ್ಯತಿಥಿಗಳನ್ನು ಆಚರಿಸುವಂತೆ ಮಧ್ವ ಜಯಂತಿಯನ್ನೂ ಆಚರಿಸಬೇಕು ಎಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: IPL 2021:​ ಚಾಂಪಿಯನ್ CSKಗೆ 20 ಕೋಟಿ... ವಿಶೇಷ ದಾಖಲೆ, ಪ್ರಶಸ್ತಿ ಗೆದ್ದ ಆಟಗಾರರ ವಿವರ ಹೀಗಿದೆ

Last Updated :Oct 16, 2021, 6:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.