ಸೈನ್ಯಕ್ಕೆ ಸೇರ ಬಯಸುವ ಗ್ರಾಮೀಣ ಯುವಕರಿಗೆ ಮಿಲಿಟರಿ ತರಬೇತಿ ನೀಡ್ತಿದೆ ದೇಶ ಪ್ರೀಮಿಗಳ ತಂಡ

author img

By

Published : Oct 9, 2021, 7:43 PM IST

Nation lover team members giving military training to baindur youths

ಪ್ರತಿದಿನ ಬೆಳಗ್ಗೆ 5.30 ರಿಂದ 8.30ರವರೆಗೂ ಬೈಂದೂರಿನಲ್ಲಿರುವ ಮೈದಾನದಲ್ಲಿ ದೈಹಿಕ ಕಸರತ್ತುಗಳ ತರಬೇತಿ ನೀಡುವುದರ ಜತೆಗೆ ಸೈನ್ಯಕ್ಕೆ ಲಿಖಿತ ಪರೀಕ್ಷೆ ಯಾವ ರೀತಿಯಲ್ಲಿ ನಡೆಯುತ್ತದೆ. ಅದರ ತಯಾರಿ ಹೇಗೆ ಎನ್ನುವ ಬಗ್ಗೆಯೂ ಮಾಜಿ ಸೈನಿಕರಿಂದ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಯುವಕರನ್ನು ಸದೃಢರಾಗಿನ್ನಾಗಿ ಮಾಡಲಾಗುತ್ತಿದೆ..

ಉಡುಪಿ: ಸೈನ್ಯಕ್ಕೆ ಸೇರಬೇಕು, ದೇಶ ಕಾಯಬೇಕು ಅನ್ನೋದು ಗ್ರಾಮೀಣ ಯುವಕರ ಕನಸು. ಆದರೆ, ಸೈನ್ಯ ಸೇರುವ ಬಗ್ಗೆ ಮಾಹಿತಿ, ದೈಹಿಕ ತರಬೇತಿ ಇಲ್ಲದೆ ಹೆಚ್ಚಿನವರ ಕನಸು ಕನಸಾಗೋದೆ ಇಲ್ಲ. ಇದನ್ನು ಅರಿತ ದೇಶ ಪ್ರೀಮಿಗಳ ತಂಡವೊಂದು ಯುವಕರಿಗೆ ಸೈನ್ಯಕ್ಕೆ ಸೇರು ಬಗ್ಗೆ ತರಬೇತಿ ನೀಡಿ ಹುರಿದುಂಬಿಸುತ್ತಿದೆ.

ಗ್ರಾಮೀಣ ಯುವಕರಿಗೆ ಮಿಲಿಟರಿ ತರಬೇತಿ ನೀಡುತ್ತಿರುವ ದೇಶ ಪ್ರೀಮಿಗಳ ತಂಡ..

ಉಡುಪಿ ಜಿಲ್ಲೆಯ ಬೈಂದೂರು ಭಾಗದ ಯುವಕರು ಸೈನ್ಯ ಸೇರುವ ಕನಸು ಕಾಣುತ್ತಿದ್ದಾರೆ. ಇದನ್ನು ಬೈಂದೂರು ನೇಷನ್ ಲವರ್ ತಂಡ ನನಸು ಮಾಡಲು ಹೊರಟಿದೆ. ಉದ್ಯಮಿ ಬಾಬು ಪೂಜಾರಿ ಬೈಂದೂರು ಎಂಬುವರ ಸಹಕಾರದಲ್ಲಿ ಪ್ರಶಾಂತ ದೇವಾಡಿಗ ಅವರ ನೇತೃತ್ವದಲ್ಲಿ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಸೈನ್ಯಕ್ಕೆ ಸೇರಲು ಬೇಕಾದ ತರಬೇತಿ ನೀಡಲಾಗುತ್ತಿದೆ.

Nation lover team members giving military training to baindur youths
ಗ್ರಾಮೀಣ ಯುವಕರಿಗೆ ಮಿಲಿಟರಿ ತರಬೇತಿ ನೀಡುತ್ತಿರುವ ದೇಶ ಪ್ರೀಮಿಗಳ ತಂಡ

ಪ್ರತಿದಿನ ಬೆಳಗ್ಗೆ 5.30 ರಿಂದ 8.30ರವರೆಗೂ ಬೈಂದೂರಿನಲ್ಲಿರುವ ಮೈದಾನದಲ್ಲಿ ದೈಹಿಕ ಕಸರತ್ತುಗಳ ತರಬೇತಿ ನೀಡುವುದರ ಜತೆಗೆ ಸೈನ್ಯಕ್ಕೆ ಲಿಖಿತ ಪರೀಕ್ಷೆ ಯಾವ ರೀತಿಯಲ್ಲಿ ನಡೆಯುತ್ತದೆ. ಅದರ ತಯಾರಿ ಹೇಗೆ ಎನ್ನುವ ಬಗ್ಗೆಯೂ ಮಾಜಿ ಸೈನಿಕರಿಂದ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಯುವಕರನ್ನು ಸದೃಢರಾಗಿನ್ನಾಗಿ ಮಾಡಲಾಗುತ್ತಿದೆ.

Nation lover team members giving military training to baindur youths
ಗ್ರಾಮೀಣ ಯುವಕರಿಗೆ ಮಿಲಿಟರಿ ತರಬೇತಿ ನೀಡುತ್ತಿರುವ ದೇಶ ಪ್ರೀಮಿಗಳ ತಂಡ

ಹೀಗೆ ಗ್ರಾಮೀಣ ಯುವಕರಲ್ಲಿರುವ ಸೈನ್ಯಕ್ಕೆ ಸೇರಬೇಕೆಂಬ ಕನಸನ್ನು ನನಸು ಮಾಡುವ ಕಾರ್ಯ ಮಾಡಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಿತುರಾಜ್ ಅವಸ್ತಿ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.