ಮಲ್ಪೆಯಲ್ಲಿ ತಪ್ಪಿದ ದುರಂತ: ಕಡಲಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ

author img

By

Published : Sep 24, 2021, 6:45 AM IST

Updated : Sep 24, 2021, 8:07 AM IST

udupi

ಸ್ಥಳೀಯರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ನೀರಿಗೆ ಇಳಿದಿದ್ದ ಮೂವರು ಪ್ರವಾಸಿಗರು ಈಜುತ್ತಾ ಕಡಲಿನ ಆಳಕ್ಕೆ ಹೋಗಿ ಮುಳುಗುವ ಹಂತದಲ್ಲಿದ್ದರು. ಈ ಸಂದರ್ಭದಲ್ಲಿ ಲೈಫ್ ಗಾರ್ಡ್​ಗಳು ಕಾರ್ಯಪ್ರವೃತ್ತರಾಗಿ ಆಗಬಹುದಾದ ದುರಂತವನ್ನು ತಪ್ಪಿಸಿದ್ದಾರೆ.

ಉಡುಪಿ: ಮಲ್ಪೆ ಕಡಲ ತೀರದಲ್ಲಿ ನೀರು ಪಾಲಾಗುತ್ತಿದ್ದ ಮೂವರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ಸ್ಥಳೀಯರ ಎಚ್ಚರಿಕೆ ನಿರ್ಲಕ್ಷಿಸಿ ನೀರಿಗೆ ಇಳಿದಿದ್ದ ಮೂವರು ಪ್ರವಾಸಿಗರು ಈಜುತ್ತಾ ಕಡಲಿನ ಆಳಕ್ಕೆ ಹೋಗಿ ಮುಳುಗುವ ಹಂತದಲ್ಲಿದ್ದರು. ಈ ಸಂದರ್ಭದಲ್ಲಿ ಲೈಫ್ ಗಾರ್ಡ್​ಗಳು ಕಾರ್ಯಪ್ರವೃತ್ತರಾಗಿ ಆಗಬಹುದಾದ ದುರಂತವನ್ನು ತಪ್ಪಿಸಿದ್ದಾರೆ.

ಮಲ್ಪೆಯಲ್ಲಿ ತಪ್ಪಿದ ದುರಂತ: ಕಡಲಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ

ಕಲಬುರಗಿಯ ಅನಿಲ್ ಕುಮಾರ್, ಅಬ್ಬಾಸ್ ಅಲಿ ಮತ್ತು ನಿತಿನ್ ಮಂಡ್ಯ ರಕ್ಷಿಸಲ್ಪಟ್ಟ ಪ್ರವಾಸಿಗರು. ಜೀವರಕ್ಷಕ ದಳದ ಮಧು ಎಂಬವರು ಜೆಟ್ಸ್ಕಿ ಬೋಟ್​ ಬಳಸಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ.

udupi
ಕಡಲಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ
Last Updated :Sep 24, 2021, 8:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.