ಬಿಜೆಪಿ ಮುಖಂಡ ಮತ್ತು ಪೊಲೀಸ್​ ಇನ್​ಸ್ಪೆಕ್ಟರ್​ ನಡುವೆ ಮಾತಿನ ಚಕಮಕಿ

author img

By

Published : Sep 12, 2022, 12:36 PM IST

quarrel-between-bjp-leader-and-a-police-inspector

ಪೊಲೀಸ್ ಇನ್​ಸ್ಪೆಕ್ಟರ್​ ಅಜಯ್ ಸಾರಥಿ ಹಾಗೂ ಬಿಜೆಪಿ ಮುಖಂಡ ಪ್ರಭಾಕರ್ ಮಾತಿಗೆ ಮಾತು ಬೆಳೆದು ಸಂಘರ್ಷವಾಗಿದೆ. ಅಸಂಸದೀಯ ಪದಗಳಲ್ಲಿ ಇಬ್ಬರೂ ಬೈದಾಡಿಕೊಂಡಿದ್ದಾರೆ.

ತುಮಕೂರು : ಜಿಲ್ಲೆಯ ಪಾವಗಡ ಪೊಲೀಸ್ ಇನ್ಸಪೆಕ್ಟರ್ ಅಜಯ್ ಸಾರಥಿ ಹಾಗೂ ಬಿಜೆಪಿ ಮುಖಂಡ ಪ್ರಭಾಕರ್ ನಡುವೆ ನಡೆದಿರುವ ಮಾತಿನ ಚಕಮಕಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇಬ್ಬರ ನಡುವೆ ಅಸಂಸದೀಯ ಪದಗಳು ಬಳಕೆ ಆಗಿವೆ. ಪೊಲೀಸ್​ ಠಾಣೆಯಲ್ಲೇ ಇಬ್ಬರ ನಡುವೆ ಘರ್ಷಣೆಯಾಗಿದೆ.

ಕಳ್ಳತನ ಮಾಡುತ್ತಿರುವ ಗಾಡಿ ಸೀಸ್​ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಂಟ್ರೋಲ್ ರೂಂಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಮುಖಂಡ ಗರಂ ಆಗಿದ್ದರು. ಈ ಸಂದರ್ಭದಲ್ಲಿ ಏಕವಚನ ಬಳಸಿ ಇನ್​ಸ್ಪೆಕ್ಟರ್​ ಮಾತನಾಡಿದ್ದಾರೆ.

ಬಿಜೆಪಿ ಮುಖಂಡ ಮತ್ತು ಪೊಲೀಸ್​ ಇನ್​ಸ್ಪೆಕ್ಟರ್​ ನಡುವೆ ಮಾತಿನ ಚಕಮಕಿ

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಗೃಹ ಮಂತ್ರಿಗಳಿಗೆ ಪ್ರಭಾಕರ ದೂರು ನೀಡಿದ್ದಾರೆ. ಅಲ್ಲದೇ ಇನ್​ಸ್ಪೆಕ್ಟರ್​ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬುಟ್ಟಿಯೊಳಗಿನ ಹಾವು ಬಿಡ್ತೀವಿ ಎನ್ನುವ ಬದಲು ತನಿಖೆ ನಡೆಸಲಿ: ದಿನೇಶ್ ಗುಂಡೂರಾವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.