ಕಾಡಾನೆಗಳ ಹಾವಳಿ; ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಚನ್ನಪಟ್ಟಣ ರೈತರ ಆಕ್ರೋಶ!

author img

By

Published : Sep 17, 2021, 10:39 AM IST

elephant attack

ರೈತರ ತೋಟಕ್ಕೆ ನುಗ್ಗಿರುವ ಕಾಡಾನೆಗಳು ತೆಂಗಿನ ಮರ ಸೇರಿದಂತೆ ಹಲವು ಬೆಳೆಗಳನ್ನು ನಾಶಪಡಿಸಿವೆ.

ರಾಮನಗರ: ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಕೆರೆ ಬಳಿ ತಂಗಿದ್ದ ಮೂರು ಕಾಡಾನೆಗಳು ಮತ್ತೊಮ್ಮೆ ಪುಂಡಾಟ ನಡೆಸಿ ರೈತರ ಬೆಳೆಗಳನ್ನು ನಾಶಪಡಿಸಿವೆ.

ಬೆಂಗಳೂರು - ಮೈಸೂರು ಹೆದ್ದಾರಿಯ ಕುವೆಂಪು ಕಾಲೇಜು ಮತ್ತು ಅದರ ಪಕ್ಕದಲ್ಲಿರುವ ಅರಣ್ಯ ಇಲಾಖೆಗೆ ಸೇರಿರುವ ಕೆಂಗಲ್ ಹನುಮಂತಯ್ಯ ಥೀಮ್ ಪಾರ್ಕ್​​ನಲ್ಲಿ ಬೀಡು ಬಿಟ್ಟು ನಂತರ ರೈತರ ತೋಟಗಳಿಗೆ ಲಗ್ಗೆ ಇಟ್ಟಿವೆ. ಕೆಂಗಲ್​ನ ರೈತರೊಬ್ಬರ ತೋಟಕ್ಕೆ ನುಗ್ಗಿರುವ ಆನೆಗಳು ತೆಂಗಿನ ಮರ ಸೇರಿದಂತೆ ಹಲವು ಬೆಳೆಗಳನ್ನು ನಾಶಪಡಿಸಿವೆ.

ಈಗಾಗಲೇ ಅರೇಳು ಬಾರಿ ತೋಟಕ್ಕೆ ನುಗ್ಗಿ ಫಸಲು ಹಾಗೂ ಮರ ಮಟ್ಟುಗಳನ್ನು ಆನೆಗಳು ನಾಶ ಪಡಿಸಿದ್ದವು. ಇದೀಗ ಮತ್ತೆ ಹಾಕಿದ್ದ ತೆಂಗಿನ ಗಿಡಗಳು ಹಾಗೂ ಫಸಲು ಹಾಳು ಮಾಡಿವೆ. ಈವರೆಗೂ ತಮಗಾದ ನಷ್ಟಕ್ಕೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ದೊರೆತಿಲ್ಲ. ಈಗ ಮತ್ತದೇ ಸಂಕಷ್ಟವನ್ನು ಗಜಪಡೆ ತಂದಿಟ್ಟಿವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆನೆ ದಾಳಿ ವಿರೊಧಿಸಿ ಪ್ರತಿಭಟನೆ ನಡೆಸಿದಾಗ ಕಾಡಂಚಿಗೆ ಬಂದೋದಗುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೆ ಬರುವುದು ರೈತರು ನಷ್ಟ ಅನುಭವಿಸಿದಾಗಲೇ ಎಂದು‌ ಗ್ರಾಮಸ್ಥರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಭೂ ಕಬಳಿಕೆದಾರರ ವಿರುದ್ಧ ಮುಂದುವರಿದ ಕಾರ್ಯಾಚರಣೆ: 40.57 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಬಿಡಿಎ

ಡಿಎಫ್ಒ ದೇವರಾಜು ಮಾತನಾಡಿ, ನಮ್ಮ ಇಲಾಖೆಯಲ್ಲಿ ಯಾವುದೇ ಸಿಬ್ಬಂದಿ ಕೊರತೆ ಇಲ್ಲ, ಆನೆಗಳನ್ನು ಓಡಿಸಲು ನಾವು ಸಶಕ್ತರಾಗಿದ್ದೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.