ರಾಮನಗರ: ನಿಂತಿದ್ದ ವಾಹನಗಳಿಗೆ ಬಸ್​​ ಡಿಕ್ಕಿ ಮಗು ಸಾವು

author img

By

Published : Oct 1, 2022, 9:54 PM IST

Updated : Oct 1, 2022, 10:05 PM IST

R_kn_rmn_0

ಖಾಸಗಿ ಬಸ್ಸೊಂದು ಆರು ವಾಹನಗಳಿಗೆ ಡಿಕ್ಕಿಹೊಡೆದಿದ್ದು ಘಟನೆಯಲ್ಲಿ ಮಗುವೊಂದು ಮೃತ ಪಟ್ಟಿದೆ.

ರಾಮನಗರ: ಅತೀ ವೇಗವಾಗಿ ಬಂದ ಖಾಸಗಿ ಬಸ್ಸೊಂದು ರಸ್ತೆ ಮೇಲೆ ನಿಂತಿದ್ದ ಆರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಮೃತ ಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ನೂತನ ಬಿಎಂ ರಸ್ತೆಯ ಎಂಟಿಆರ್ ಹೋಟೆಲ್ ಬಳಿ ನಡೆದಿದೆ.

ಅತೀ ವೇಗದಲ್ಲಿ ಚಾಲಕ ಬಸ್​​ ಚಲಾಯಿಸಿದ ಹಿನ್ನೆಲೆ ಬಸ್​ ನಿಯಂತ್ರಣಕ್ಕೆ ಬಾರದೇ ಆರು ವಾಹನಗಳಿಗೆ ಡಿಕ್ಕಿಹೊಡೆದಿದೆ. ಪರಿಣಾಮ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದ್ದು, ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮನಗರದಲ್ಲಿ ರಸ್ತೆ ಅಪಘಾತ

ಇದನ್ನೂ ಓದಿ: ಭಟ್ಕಳದಲ್ಲಿ ಟೆಂಪೋ-ಐರಾವತ ಬಸ್ ನಡುವೆ ಅಪಘಾತ.. 20ಕ್ಕೂ ಹೆಚ್ಚು ಮಂದಿಗೆ ಗಾಯ

Last Updated :Oct 1, 2022, 10:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.