ಸಾವಿನಲ್ಲೂ ಒಂದಾದ ದಂಪತಿ: ಕಣ್ವ ನದಿ ದಾಟುವಾಗ ಜಾರಿ ಬಿದ್ದು ಸಾವು

author img

By

Published : Sep 30, 2022, 2:07 PM IST

ರಾಮನಗರ

ಹಸು ಮೆಯಿಸಿಕೊಂಡು ಬರುತ್ತಿರುವಾಗ ಕಣ್ವ ನದಿಯನ್ನು ದಾಟುವಾಗ ದಂಪತಿಗಳಿಬ್ಬರು ಕಾಲು ಜಾರಿ ಬಿದ್ದು, ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.

ರಾಮನಗರ: ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಹಸು ಮೆಯಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ, ಕಣ್ವ ನದಿಯನ್ನು ದಾಟುವಾಗ ಜಾರಿ ಬಿದ್ದು ದಂಪತಿಗಳಿಬ್ಬರು ಮೃತಪಟ್ಟಿದ್ದಾರೆ. ಕೂಡ್ಲೂರು ಗ್ರಾಮದ ವೆಂಕಟೇಶ್ (65) ಹಾಗೂ ಕಾಳಮ್ಮ (60) ಮೃತಪಟ್ಟಿರುವ ದುರ್ದೈವಿಗಳು.

ಎಂದಿನಂತೆ ಹಸು ಮೆಯಿಸಿಕೊಂಡು ಮಿನಕೆರೆ ದೊಡ್ಡಿ ತೋಟದ ಕಡೆಯಿಂದ ಸಂಜೆ ಕೂಡ್ಲೂರಿಗೆ ದಂಪತಿ ವಾಪಸ್ ಆಗುತ್ತಿದ್ದರು. ಕಣ್ವ ನದಿಯನ್ನು ದಾಟುತ್ತಿದ್ದ ವೇಳೆ ಹಸು ಹಗ್ಗವನ್ನು ಕಳಚಿಕೊಂಡು ಮುಂದೆ ಹೋಗಿದೆ.

ಇದನ್ನೂ ಓದಿ: ಸಾವಿನಲ್ಲೂ ಒಂದಾದ ದಂಪತಿ.. 3 ಗಂಟೆ ಅಂತರದಲ್ಲಿ ಪತಿ ಹಿಂಬಾಲಿಸಿದ ಪತ್ನಿ

ಪರಿಣಾಮ ಅದನ್ನು ಹಿಡಿಯಲು ಹೋಗಿ ಕಾಳಮ್ಮ ಪಾಚಿ ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದಾರೆ. ಅವರನ್ನು ಕಾಪಾಡಲು ಹೋದ ಪತಿ ವೆಂಕಟೇಶ್ ಸಹ ಜಾರಿ ಬಿದ್ದು, ಕಣ್ವ ನದಿಯ ಮಡುವಿಗೆ ಸಿಲುಕಿ ಮೃತಪಟ್ಟಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.