ರಾಯಚೂರಲ್ಲಿ ಯುವಕನ ಬರ್ಬರ ಕೊಲೆ: ರಕ್ತಸಿಕ್ತ ಮೃತದೇಹ ಕಂಡು ಬೆಚ್ಚಿಬಿದ್ದ ಜನರು

author img

By

Published : Sep 21, 2022, 7:56 PM IST

young-man-brutally-murdered-in-raichur

ರಾಯಚೂರಿನ ಗಿಲ್ಲೆಸೂಗೂರು ಕ್ಯಾಂಪ್‌ನ ಮನೆಯೊಂದರಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

ರಾಯಚೂರು: ಮನೆಯೊಂದರಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಗಿಲ್ಲೆಸೂಗೂರು ಕ್ಯಾಂಪ್‌ನಲ್ಲಿ ಜರುಗಿದೆ. ನರಸಿಂಹಲು ತಿಮ್ಮಪ್ಪ(26) ಎಂಬಾತ ಕೊಲೆಯಾದ ವ್ಯಕ್ತಿ.

ಮನೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ನರಸಿಂಹಲುನನ್ನು ಕಂಡು ಜನರು ಬಿಚ್ಚಿಬಿದ್ದಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಧ್ಯಾಹ್ನದ ವೇಳೆ ಹತ್ಯೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಇಡಪನೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯಿಂದ ಗ್ರಾಮಸ್ಥರು ಸಹ ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: ಲಿಫ್ಟ್​ ನೆಪದಲ್ಲಿ ಬೈಕ್ ಸವಾರನಿಗೆ ವಿಷದ ಇಂಜೆಕ್ಷನ್ ಚುಚ್ಚಿದ ಆರ್​ಎಂಪಿ ವೈದ್ಯ: ಪತ್ನಿ ಫೋನ್​ ಕಾಲ್​ನಲ್ಲಿತ್ತು ಕೊಲೆ ರಹಸ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.