Great rescue  ಕೃಷ್ಣಾ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ, 30 ಕುರಿಗಳನ್ನು ರಕ್ಷಿಸಿದ NDRF

author img

By

Published : Sep 10, 2021, 11:32 AM IST

rescue

ಕುರಿಗಳನ್ನು ಮೇಯಿಸಲು ತೆರಳಿ, ನಡುಗಡ್ಡೆಯಲ್ಲಿ ಸಿಲುಕಿದ್ದ ವ್ಯಕ್ತಿ ಹಾಗೂ 30 ಕುರಿಗಳನ್ನು ಎನ್​ಡಿಆರ್​ಎಫ್ ಸಿಬ್ಬಂದಿ ರಕ್ಷಿಸಿದೆ.

ರಾಯಚೂರು: ಕುರಿ ಮೇಯಿಸಲು ಹೋಗಿ ಕೃಷ್ಣಾ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ ಹಾಗೂ 30 ಕುರಿಗಳನ್ನು ಎನ್​ಡಿಆರ್​ಎಫ್​ ತಂಡ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಕೃಷ್ಣಾ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ, 30 ಕುರಿಗಳನ್ನು ರಕ್ಷಿಸಿದ NDRF

ನಿನ್ನೆ, ಲಿಂಗಸುಗೂರು ತಾಲೂಕಿನ ರಾಮಲೂಟಿ ಗ್ರಾಮದ ಬಸಪ್ಪ ಕೊತಿಂಬಳ್​​ ಕುರಿ ಮೇಯಿಸಲು ತೆರಳಿದ್ದರು. ಈ ವೇಳೆ ನದಿ ದಾಟಲಾಗದೇ ನಡುಗಡ್ಡೆಯಲ್ಲಿ ಸಿಲುಕಿದ್ದರು. ಮಾಹಿತಿ ತಿಳಿದ ತಹಶೀಲ್ದಾರ್ ಚಾಮರಾಜ ಪಾಟೀಲ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೂಡಲೇ ಎನ್​ಡಿಆರ್​ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ನಿರಂತರ ಕಾರ್ಯಾಚರಣೆ ಮೂಲಕ ಬಸಪ್ಪ ಹಾಗೂ ಕುರಿಗಳನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ಯುವಕರ ವಿಭಿನ್ನ ಪ್ರತಿಭಟನೆಗೆ ಮಣಿದ ಶಾಸಕರು: ರಸ್ತೆ ಕಾಮಗಾರಿಗೆ ಚಾಲನೆ

ನಿನ್ನೆ ಬೆಳಗ್ಗೆ ಆತ ಕುರಿ ಮೇಯಿಸಲು ತೆರಳಿದ್ದ ವೇಳೆ ನದಿಯಲ್ಲಿ ನೀರು ಇರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಏಕಾಏಕಿ ಹರಿದು ಬಂದ ನೀರಿನಿಂದ ಪ್ರವಾಹ ಪರಿಸ್ಥಿತಿ ಉಂಟಾಯಿತು. ಇಂದು NDRF ಸಿಬ್ಬಂದಿ ಅವರನ್ನು ರಕ್ಷಿಸಿ ಬೋಟ್​ ಮೂಲಕ ಕರೆತಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.