ಪಿಎಸ್​ಐ ಹಗರಣದಲ್ಲಿ ಶಾಸಕರು ತನಿಖೆಗೊಳಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಿ: ಶಿವರಾಜ್ ತಂಗಡಗಿ

author img

By

Published : Sep 18, 2022, 6:36 PM IST

shivaraj-tangadagi-statement-against-basavaraj-dadesuguru

ಶಾಸಕ ಬಸವರಾಜ ದಢೇಸುಗೂರು ತಾವು ಪಿಎಸ್​ಐ ಹಗರಣದಲ್ಲಿ ಭಾಗಿಯಾಗಿಲ್ಲ ಎಂದಾದರೆ ಈ ಬಗ್ಗೆ ಸರ್ಕಾರಕ್ಕೆ ತನ್ನನ್ನು ತನಿಖೆಗೊಳಪಡಿಸುವಂತೆ ಪತ್ರ ಬರೆಯಲಿ ಎಂದು ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.

ರಾಯಚೂರು : ಶಾಸಕ ಬಸವರಾಜ ದಢೇಸುಗೂರು ಪಿಎಸ್‌ಐ ಹಗರಣದಲ್ಲಿ ತಾವು ಭಾಗಿಯಾಗಿಲ್ಲ ಎಂದು ಹೇಳಿದರೆ, ತಮ್ಮನ್ನು ತನಿಖೆಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಕೊಪ್ಪಳ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಶಿವರಾಜ್ ತಂಗಡಗಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಪರಸಪ್ಪನ ಹತ್ತಿರ ಹಣ ತೆಗೆದುಕೊಂಡಿರುವ ಕುರಿತಂತೆ ದೂರವಾಣಿಯಲ್ಲಿ ಮಾತನಾಡಿರುವ ಧ್ವನಿಯನ್ನು ರೆಕಾರ್ಡ್ ಮಾಡುವ ಮೂಲಕ ಸಾಕ್ಷಿ ಸಮೇತವಾಗಿ ಬಹಿರಂಗಗೊಳಿಸಲಾಗಿದೆ. ಈ ಬಗ್ಗೆ ಶಾಸಕರು ನಾನು ಮಾತನಾಡಿರುವುದು ಎಂದು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಹಗರಣದಲ್ಲಿ ತಾವು ಇಲ್ಲ ಎನ್ನುವುದಾದರೆ ಸರ್ಕಾರಕ್ಕೆ ತಾವೇ ಪತ್ರ ಬರೆದು, ಈ ಮೂಲಕ ತನಿಖೆಗೆ ಒಳಪಡಿಸುವಂತೆ ಹೇಳಲಿ ಎಂದು ಹೇಳಿದರು.

ಪಿಎಸ್‌ಐ ಹಗರಣದಲ್ಲಿ ಭಾಗಿಯಾದ ಕೆಲ ಅಧಿಕಾರಿಗಳನ್ನು ಸರ್ಕಾರ ಬಂಧಿಸಿದೆ. ಆದರೆ ಶಾಸಕರನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೇ ಈ ಹಗರಣದ ಬಗ್ಗೆ ಈಗ ನಡೆಯುತ್ತಿರುವ ಸದನದಲ್ಲಿ ಸಿಪಿಎಲ್‌ ನಾಯಕರು ವಿಷಯ ಪ್ರಸ್ತಾಪಿಸಲಿದ್ದು, ಚರ್ಚೆಯ ಬಳಿಕ ಸರ್ಕಾರದಿಂದ ಬರುವ ಉತ್ತರದಿಂದ ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ವಿಮ್ಸ್​ನ ಐಸಿಯುನಲ್ಲಿ ಸಾವು ಪ್ರಕರಣ.. ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ, ಪರಿಶೀಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.