ರಾಯಚೂರಲ್ಲಿ ನೀರುಪಾಲಾದ ತಂದೆ ಮೃತದೇಹ ಪತ್ತೆ.. ಕುಟುಂಬಸ್ಥರ ಆಕ್ರಂದನ

author img

By

Published : Nov 19, 2022, 10:38 AM IST

person-dead-body-found-in-narayanapur-dam-back-water

ಲಿಂಗಸುಗೂರು ತಾಲೂಕಿನ ಪಲಗಲದಿನ್ನಿ ಗ್ರಾಮದ ನಾರಾಯಣಪುರ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪಲಗಲದಿನ್ನಿ ಗ್ರಾಮದ ನಾರಾಯಣಪುರ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ತಂದೆ ಮತ್ತು ಮಗು ನೀರುಪಾಲಾದ ಘಟನೆಯಲ್ಲಿ ಮೃತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತದೇಹ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೂರು ವರ್ಷದ ಮಗು ಲಕ್ಕಪ್ಪ ಹಾಗೂ ತಂದೆ ರಮೇಶ್ (35) ಗುರುವಾರ ನೀರುಪಾಲಾಗಿದ್ದರು. ಮಗುವಿನ ಮೃತದೇಹ ಅಂದೇ ಪತ್ತೆಯಾಗಿತ್ತು. ರಮೇಶ್​ ಪತ್ನಿ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಅಲ್ಲಿಯೇ ಆಟವಾಡುತ್ತಿದ್ದ ಮಗು ಕಾಲು ಜಾರಿ ನೀರಿಗೆ ಬಿದ್ದಿತ್ತು. ಆಗ ಹಿನ್ನೀರಿನಲ್ಲಿ ಮೀನು ಹಿಡಿಯುತ್ತಿದ್ದ ತಂದೆ ಆತುರವಾಗಿ ಬರುವಾಗ ಹರಗೋಲು ಪಲ್ಟಿ ಹೊಡೆದು ನೀರಿನಲ್ಲಿ ಮುಳುಗಿದ್ದರು.

ಇದನ್ನೂ ಓದಿ: ರಾಯಚೂರಿನಲ್ಲಿ ಹೃದಯ ವಿದ್ರಾವಕ ಘಟನೆ: 3 ವರ್ಷದ ಮಗು ಸೇರಿ ನೀರುಪಾಲಾದ ತಂದೆ

ಅಗ್ನಿಶಾಮಕ ದಳ, ಮೀನುಗಾರರು ಹಾಗೂ ‌ಪೊಲೀಸರು ಶೋಧ ಕಾರ್ಯ ನಡೆಸಿ ಮೃತದೇಹ ಪತ್ತೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಮೃತದೇಹ ಒಪ್ಪಿಸಲಾಗಿದೆ. ಘಟನೆ ಬಗ್ಗೆ ಮುದಗಲ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಿಶ್ಚಿತಾರ್ಥಕ್ಕೆ ಹೊರಟ ಟೆಂಪೋ ಪಲ್ಟಿ; ಒಂದೇ ಕುಟುಂಬದ 28 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.