ಕೃಷ್ಣಾ ನದಿಯಲ್ಲಿ ಸಾಹಸ ಮಾಡಿ ನಡುಗಡ್ಡೆಯಲ್ಲಿದ್ದ ರೋಗಿಗೆ ಔಷಧ ರವಾನಿಸಿದ ವೈದ್ಯರು

author img

By

Published : Sep 18, 2022, 2:17 PM IST

doctors delivered medicine to patient

ಭೋರ್ಗರೆಯುವ ಕೃಷ್ಣಾ ನದಿಯಲ್ಲಿ ತೆಪ್ಪದಲ್ಲಿ ತೆರಳಿದ ವೈದ್ಯರ ತಂಡ ಪಾರ್ಶ್ವವಾಯುನಿಂದ ಬಳಲುತ್ತಿದ್ದ ರೋಗಿಗೆ ಸಕಾಲದಲ್ಲಿ ಔಷಧಿ ಪೂರೈಸಿ ಮಾನವೀಯತೆ ಮೆರೆದರು.

ರಾಯಚೂರು: ಕೃಷ್ಣಾ ನದಿ ಪ್ರವಾಹದಿಂದಾಗಿ ನಡುಗಡ್ಡೆಯಲ್ಲಿ ಸಿಲುಕಿದ್ದ ರೋಗಿಗೆ ಔಷಧಿ ತಲುಪಿಸುವ ಮೂಲಕ ವೈದ್ಯರ ತಂಡ ಸಾಹಸ ಮಾಡಿ ಮಾನವೀಯತೆ ತೋರಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಲಿಂಗಸುಗೂರು ತಾಲೂಕಿನ ಕರಕಲಗಡ್ಡೆಯಲ್ಲಿ ಈ ಘಟನೆ ನಡೆಯಿತು. ಭೋರ್ಗರೆಯುವ ನದಿಯಲ್ಲಿ ತೆಪ್ಪದಲ್ಲಿ ಸಾಗಿದ 6 ಜನರ ವೈದ್ಯರ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ನಡುಗಡ್ಡೆಯಲ್ಲಿ ಸಿಲುಕಿದ್ದ ರೋಗಿಗೆ ಔಷಧಿ ತಲುಪಿಸಿದ ವೈದ್ಯರು

ಇದನ್ನೂ ಓದಿ: ಹೃದಯಾಘಾತಗೊಂಡು ಕುಸಿದ ವೃದ್ಧ ಮಹಿಳೆ.. ಕ್ಷಣಮಾತ್ರದಲ್ಲಿ ಜೀವ ಉಳಿಸಿದ ವೈದ್ಯ

ಕರಕಲಗಡ್ಡಿ ನಿವಾಸಿ ತಿಪ್ಪಣ್ಣ ಪಾರ್ಶ್ಚವಾಯುನಿಂದ ಬಳಲುತ್ತಿದ್ದರು. ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ತಿಪ್ಪಣ್ಣ ಕುಟುಂಬಸ್ಥರು ವಾಸಿಸುತ್ತಿದ್ದು, ಕಳೆದ ಕೆಲವು ದಿನಗಳಿಂದ ಔಷಧಿ ಖಾಲಿಯಾಗಿ ಸಂಕಷ್ಟದಲ್ಲಿದ್ದರು. ಈ ಮಾಹಿತಿ ಪಡೆದ ವೈದ್ಯರು, ಕೂಡಲೇ ಔಷಧಿ ಪೂರೈಕೆಗೆ ಮುಂದಾಗಿದ್ದಾರೆ. ಮುಳುಗು ತಜ್ಞರ ಜೊತೆ ಸೇರಿ ಜೀವದ ಹಂಗು ತೊರೆದು ಔಷಧಿ ತಲುಪಿಸಿ ಸುರಕ್ಷಿತವಾಗಿ ವಾಪಸ್ ಮರಳಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್‌ನಲ್ಲಿ ಸಿಲುಕಿ ಸಂಕಟ, 3 ಕಿ.ಮೀ ಓಡಿ ಬಂದು ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬೆಂಗಳೂರಿನ ವೈದ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.