ಕಸಾಯಿಖಾನೆಗೆ ಸಾಗಿಸುತ್ತಿದ್ದ 58 ಜಾನುವಾರು ರಕ್ಷಣೆ; 7 ಆರೋಪಿಗಳ ಬಂಧನ

author img

By

Published : Nov 21, 2022, 1:05 PM IST

Raichur: Rescue of 58 cattle being transported to slaughter house; 7 arrested

ಜಾನುವಾರುಗಳನ್ನು ಮಿನಿ ಲಾರಿ ಹಾಗೂ ಬೊಲೆರೋಗಳಲ್ಲಿ ತುಂಬಿಕೊಂಡು ಕಲಬುರಗಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ರಾಯಚೂರು: ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ದೇವದುರ್ಗ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೊಲೀಸ್‌ ಕಾರ್ಯಾಚರಣೆಯಲ್ಲಿ 7 ಆರೋಪಿಗಳನ್ನು ಬಂಧಿಸಿದ್ದು, 58 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ತಲಾ 2 ಮಿನಿ ಲಾರಿ, ಬೊಲೊರೋ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಮಹಮ್ಮದ್ ಗೌಸ್, ಮಹಮ್ಮದ್ ಫರ್ವೇಜ್, ಆರಿಫ್, ಮೊಹಮ್ಮದ್ ಅಬೀಬ್, ಶೇಕ್ ಖಯೂಬ್, ನಿಸಾರ ಅಹ್ಮದ್​ ಮತ್ತು ಮಹ್ಮದ್ ಅಸೀಫ್ ಬಂಧಿತರು. ಇವರು ಕಲಬುರ್ಗಿ ಮೂಲದವರು ಎಂದು ತಿಳಿದು ಬಂದಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವದುರ್ಗ ಪಟ್ಟಣದ ಹೊರವಲಯದ ಸಿರವಾರ ಕ್ರಾಸ್ ಹತ್ತಿರ ಜಾನುವಾರುಗಳನ್ನು ತುಂಬಿಕೊಂಡು ಕಲಬುರಗಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ.. ಸ್ಥಳಕ್ಕೆ ಹೋದ ಶಾಸಕನ ಮೇಲೆ ಹಲ್ಲೆ ಮಾಡಿ ಅಂಗಿ ಹರಿದ್ರಾ ಗ್ರಾಮಸ್ಥರು!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.