ಹಟ್ಟಿ ಚಿನ್ನದ ಗಣಿ ಕೊಲೆ ಪ್ರಕರಣ : ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ ಪೊಲೀಸರು

author img

By

Published : Sep 5, 2021, 10:56 PM IST

accused-arrest-for-murder-in-hatti-gold-mine-bus-station

ಡಿವೈಎಸ್​ಪಿ ಎಸ್ ಎಸ್ ಹುಲ್ಲೂರು, ಸಿಪಿಐ ಮಹಾಂತೇಶ್ ಸಜ್ಜನ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಭಾನುವಾರ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ..

ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕು ಹಟ್ಟಿ ಚಿನ್ನದ ಗಣಿಯ ಹೊಸ ಬಸ್ ನಿಲ್ದಾಣದ ಬಳಿ ಶನಿವಾರ ಮಧ್ಯಾಹ್ನ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಗ್ಯಾರೇಜ್​ ಹಾಕುವ ವಿಷಯಕ್ಕೆ ಸಂಬಂಧಿಸಿ ನಡೆದಿದ್ದ ಜಗಳಕ್ಕೆ ಸ್ನೇಹಿತ ಮೆಹಬೂಬ್​ ಎಂಬುವರ ಕುಮ್ಮಕ್ಕಿನಿಂದ ಮುಸ್ತಫಾ ಹಾಗೂ ಮೌಲಿಪಾಷ ಎಂಬುವರು ಮುರ್ತುಜಾ ಅನ್ಸಾರಿ ಎಂಬುವರನ್ನು ಕೊಲೆ ಮಾಡಿದ್ದರು.

ಡಿವೈಎಸ್​ಪಿ ಎಸ್ ಎಸ್ ಹುಲ್ಲೂರು, ಸಿಪಿಐ ಮಹಾಂತೇಶ್ ಸಜ್ಜನ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಭಾನುವಾರ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಓದಿ: ಹಳೇ ವೈಷಮ್ಯ : ವೃತ್ತಿ ಕಲಿಸಿದ ಗುರುವನ್ನೇ ಕೊಂದ ಶಿಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.