ಹೆಚ್‌.ಡಿ.ಕೋಟೆ: ಗ್ರಾಮಕ್ಕೆ ನುಗ್ಗಿ ಒಂಟಿ ಸಲಗ ರಂಪಾಟ; ಮನೆ, ಎತ್ತಿನ ಗಾಡಿ ಜಖಂ

author img

By

Published : Sep 19, 2022, 12:21 PM IST

Updated : Sep 19, 2022, 2:09 PM IST

wild elephant

ಒಂಟಿ ಸಲಗವೊಂದು ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮಕ್ಕೆ ನುಗ್ಗಿ ಮನೆ ಹಾಗೂ ಎತ್ತಿನ ಗಾಡಿಯನ್ನು ಜಖಂಗೊಳಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.

ಮೈಸೂರು: ಆಹಾರ ಹುಡುಕುತ್ತಾ ಕಾಡಿನಿಂದ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗವೊಂದು ಜನರಲ್ಲಿ ಆತಂಕ ಉಂಟು ಮಾಡಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.

ನಾಗರಹೊಳೆ ಅಭಯಾರಣ್ಯದಿಂದ ಆಹಾರ ಅರಸಿ ಕಳೆದ ರಾತ್ರಿ ನಾಡಿಗೆ ಬಂದ ಒಂಟಿ ಸಲಗ, ಇಂದು ಬೆಳಗ್ಗೆ ಬೂದನೂರು ಗ್ರಾಮಕ್ಕೆ ನುಗ್ಗಿತು. ಆನೆಯನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡು ಕಲ್ಲನ್ನು ಎಸೆಯುವ ಮೂಲಕ ಓಡಿಸಲು ಪ್ರಯತ್ನಿಸಿದರು. ಇದರಿಂದ ರೊಚ್ಚಿಗೆದ್ದ ಸಲಗ ಗ್ರಾಮದ ಮನೆಯೊಂದನ್ನು ಹಾಗೂ ಎತ್ತಿನ ಗಾಡಿಯನ್ನು ಪುಡಿಗಟ್ಟಿದೆ.

ಗ್ರಾಮಕ್ಕೆ ನುಗ್ಗಿ ಒಂಟಿ ಸಲಗ ರಂಪಾಟ

ಇದನ್ನೂ ಓದಿ: ಕಾಡಿನಿಂದ ನಾಡಿಗೆ ಬಂದ ಒಂಟಿ ಸಲಗ: ಆತಂಕದಲ್ಲಿ ಗ್ರಾಮಸ್ಥರು

ಇನ್ನೂ ಆನೆ ಗ್ರಾಮದಲ್ಲೇ ಓಡಾಡುತ್ತಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದಾರೆ. ಪಟಾಕಿ ಸಿಡಿಸಿ ಒಂಟಿ ಸಲಗವನ್ನು ಕಾಡಿಗಟ್ಟುವ ಪ್ರಯತ್ನ ಮಾಡಲಾಗುತ್ತಿದೆ.

Last Updated :Sep 19, 2022, 2:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.