ಮೃತ ವ್ಯಕ್ತಿಗೂ ಆಹ್ವಾನ, ಪ್ರತಾಪ್​ ಸಿಂಹ ಚಾಮರಾಜನಗರ ಸಂಸದ.. ಆಹ್ವಾನ ಪತ್ರಿಕೆಯಲ್ಲಿ ಮಹಾ ಎಡವಟ್ಟು

author img

By

Published : Sep 27, 2022, 11:01 AM IST

Mistakes in Dasara kavi ghosti invitation letter

ದಸರಾ ಸಾಹಿತಿಗಳ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಮೃತ ವ್ಯಕ್ತಿಗೂ ಕವಿಗೋಷ್ಠಿಗೆ ಆಹ್ವಾನ ನೀಡುವುದರ ಮೂಲಕ ಎಡವಟ್ಟು ಮಾಡಲಾಗಿದೆ.

ಮೈಸೂರು: ಮೃತ ವ್ಯಕ್ತಿ ಹೆಸರು ಹಾಗೂ ಪ್ರತಾಪ್​ ಸಿಂಹ ಅವರನ್ನು ಚಾಮರಾಜನಗರ ಸಂಸದ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವ ಮೂಲಕ ದಸರಾ ಕವಿಗೋಷ್ಠಿ ಆಯೋಜಕರು ಎಡವಟ್ಟು ಮಾಡಿದ್ದಾರೆ.

ದಸರಾ ಸಾಹಿತಿಗಳ ಆಹ್ವಾನ ಪತ್ರಿಕೆಯಲ್ಲಿ ನಿಧನರಾಗಿದ್ದ ಸಾಹಿತಿ ಹೆಸರು ಪ್ರಕಟ ಮಾಡಲಾಗಿದೆ. ಆಕಾಶವಾಣಿ ನಿಲಯ ನಿರ್ದೇಶಕರು ಹಾಗೂ ಸಾಹಿತಿಯಾಗಿದ್ದ ರವೀಂದ್ರ ಕುಮಾರ್ ಅವರು, 2019ರಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಹೆಸರನ್ನು ಕವಿಗೋಷ್ಠಿ ಆಯೋಜಕರು ಮುದ್ರಿಸಿದ್ದಾರೆ. ಪ್ರಮಾದ ಅರಿವಾಗುತ್ತಿದ್ದಂತೆ ದಸರಾ ಸಮಿತಿ ಮರು ಪಟ್ಟಿ ಬಿಡುಗಡೆ ಮಾಡಿದೆ.

Mistakes in Dasara kavi ghosti invitation letter
ಪ್ರತಾಪ್​ ಸಿಂಹ ಚಾಮರಾಜನಗರ ಸಂಸದ: ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಎಡವಟ್ಟು

ಆದರೆ ಮರು ಮುದ್ರಣ ಪಟ್ಟಿಯಲ್ಲಿಯೂ ಪ್ರತಾಪ್​ ಸಿಂಹ ಚಾಮರಾಜನಗರ ಸಂಸದ ಎಂದು ಮುದ್ರಣ ಮಾಡಲಾಗಿದೆ. ಸೋಮವಾರ ದಸರಾ ಸಾಹಿತಿಗಳ ಕವಿಗೋಷ್ಠಿ ನಡೆಯಲಿದ್ದು, ನಾಡಿನ ಹೆಸರಾಂತ ಕವಿಗಳು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಚಾಮುಂಡೇಶ್ವರಿ ದೇವಿ ಮೂರ್ತಿ ಉಡುಗೊರೆ; ದಸರಾ ಮೆರಗು ಹೆಚ್ಚಿಸಿದ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.