ಮೈಸೂರು: ಇಂಜಿನಿಯರ್ ಶ್ರೀನಿವಾಸ್ ಬ್ಯಾಂಕ್​ ಲಾಕರ್ ಪರಿಶೀಲನೆ, ಒಂದೂವರೆ ಕೆಜಿ ಚಿನ್ನ ಪತ್ತೆ?

author img

By

Published : Nov 25, 2021, 4:04 PM IST

Updated : Nov 25, 2021, 5:39 PM IST

mysore canara bank

ಹೆಚ್‌ಎಲ್‌ಬಿಸಿ ಕಾರ್ಯಕಾರಿ ಇಂಜಿನಿಯರ್ ಶ್ರೀನಿವಾಸ್ ಮನೆಯ ಮೇಲೆ ನಿನ್ನೆ (ಬುಧವಾರ) ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿತ್ತು. ಇಂದು ಮೈಸೂರಿನ ಸರಸ್ವತಿಪುರಂನಲ್ಲಿರುವ ಕೆನರಾ ಬ್ಯಾಂಕ್​ನಲ್ಲಿ ಭ್ರಷ್ಟ ಅಧಿಕಾರಿ ಹೊಂದಿರುವ ಲಾಕರ್​​​ ಅನ್ನು ತನಿಖಾಧಿಕಾರಿಗಳು ಪರಿಶೀಲಿಸಿದರು.

ಮೈಸೂರು: ಹೆಚ್‌ಎಲ್‌ಬಿಸಿ ಎಕ್ಸಿಕ್ಯೂಟಿವ್‌ ಇಂಜಿನಿಯರ್ ಶ್ರೀನಿವಾಸ್ ಮನೆ ಮೇಲೆ ಬುಧವಾರ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ಇಂದು ಅವರ ಬ್ಯಾಂಕ್​ ಲಾಕರ್​​ ಪರಿಶೀಲಿಸಿದರು. ಶ್ರೀನಿವಾಸ್ ಮಾನೆ ಅವರ ಬ್ಯಾಂಕ್ ಲಾಕರ್​ ಅಲ್ಲಿ ಒಂದೂವರೆ ಕೆಜಿ ಚಿನ್ನಾಭರಣ ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ನಗರದ ಸರಸ್ವತಿಪುರಂನಲ್ಲಿರುವ ಕೆನರಾ ಬ್ಯಾಂಕ್​ಗೆ 8 ಅಧಿಕಾರಿಗಳ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸಿದರು. ಸತತ 6 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಿದ್ದು, ಒಂದೂವರೆ ಕೆಜಿ ಚಿನ್ನಾಭರಣ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಎಸಿಬಿ ಅಧಿಕಾರಿಗಳ ವಿಚಾರಣೆ ನಂತರ ಬ್ಯಾಂಕ್​ನಿಂದ ಶ್ರೀನಿವಾಸ್ ಹಾಗೂ ಅವರ ಪತ್ನಿ ಮನೆಗೆ ತೆರಳಿದರು. ಆದರೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಂಜಿನಿಯರ್ ಶ್ರೀನಿವಾಸ್ ದಂಪತಿ ನಿರಾಕರಿಸಿದರು.

ಪತ್ನಿಯೊಂದಿಗೆ ಬ್ಯಾಂಕ್​ಗೆ ಆಗಮಿಸಿದ ಶ್ರೀನಿವಾಸ್​

ಕೆನರಾ ಬ್ಯಾಂಕ್​ನಿಂದ ಅಧಿಕಾರಿಗಳು ಪ್ರಿಂಟರ್, ಬ್ಯಾಗ್‌ನೊಂದಿಗೆ ಅಧಿಕಾರಿಗಳು ಹೊರ ಬಂದಿದ್ದಾರೆ. ಭ್ರಷ್ಟ ಅಧಿಕಾರಿ ವಿರುದ್ಧ ಎಸಿಬಿ ತನಿಖೆ ಚುರುಕುಗೊಳಿಸಿದ್ದು, ಬೇನಾಮಿ ಹೆಸರಿನಲ್ಲಿ‌ ಆಸ್ತಿ ಖರೀದಿ ಮಾಡಿರುವ ಶಂಕೆ‌ ವ್ಯಕ್ತವಾಗಿದೆ. ಹೀಗಾಗಿ ಎಲ್ಲಾ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಧಾರವಾಡ SDM ಮೆಡಿಕಲ್‌ ಕಾಲೇಜಿನ 66 ​ವಿದ್ಯಾರ್ಥಿಗಳಿಗೆ ಕೋವಿಡ್‌..2 ಹಾಸ್ಟೆಲ್​ ಸೀಲ್​ಡೌನ್​!

Last Updated :Nov 25, 2021, 5:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.