ಮಂಡ್ಯ : ಪತಿಗೆ ಹಾಗೂ ತನಗೆ ಡಿವೈಎಸ್ಪಿಯೊಬ್ಬರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮುಖ್ಯಮಂತ್ರಿ ಭೇಟಿಗಾಗಿ ಮುಗಿಬಿದ್ದ ಘಟನೆ ನಗರದಲ್ಲಿ ನಡೆದಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ದೂರುದಾರರಾದ ಮಹೇಶ್ವರಿ ಎಂಬುವರು, ಮಂಡ್ಯ ಡಿವೈಎಸ್ಪಿ ಮಂಜುನಾಥ್ ಅವರು ತಮ್ಮ ಪತಿ ವಕೀಲರು ಎಂಬುದನ್ನು ಪರಿಗಣಿಸದೆ ಬೂಟು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಅಲ್ಲದೇ, ಪತಿ ಮೇಲೆ ಇದ್ದ ಪ್ರಕರಣವನ್ನು ಕೈಬಿಡಬೇಕಾದರೆ ಹಣ ನೀಡಬೇಕು ಎಂದು ನನಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.
ಈ ಕುರಿತು ಕ್ರಮ ಕೈಗೊಳ್ಳುವಂತೆ ನಾನು ಸಿಎಂ ಭೇಟಿಗೆ ಮುಂದಾದಾಗ ನನ್ನನ್ನು ತಳ್ಳಲಾಯಿತು. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಈಗಾಗಲೇ ಎಸ್ಪಿ ಅವರಿಗೂ ದೂರು ಸಲ್ಲಿಸಿದ್ದೇನೆ ಎಂದು ಅವರು ಹೇಳಿದರು.
ಓದಿ: ನೀವು ಒಂದು ಕುಟುಂಬ ಹಿನ್ನೆಲೆ ಗಾಯಕರಾಗಿದ್ದೀರಿ : ಸಿದ್ದರಾಮಯ್ಯಗೆ CM ತಿರುಗೇಟು