ಮಂಡ್ಯ : ನಿಖಿಲ್ಗೌಡ ಎಂಬ ವ್ಯಕ್ತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ.ಅಶ್ವಿನಿ ಮನೆ ಮುಂದೆ ಗಲಾಟೆ ಮಾಡಿರುವ ಆರೋಪ ಕೇಳಿ ಬಂದಿದೆ.
ಭಾನುವಾರ ಮುಂಜಾನೆ ಹಲ್ಮಿಡಿ ಗ್ರೂಪ್ಸ್ ಮುಖ್ಯಸ್ಥನಾಗಿರುವ ನಿಖಿಲ್ಗೌಡ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಎಸ್ಪಿ ಮನೆ ಮುಂದೆ ಆಗಮಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೂಗಾಟ, ಕಿರುಚಾಟ ಮಾಡುವ ಮೂಲಕ ರಂಪಾಟ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂದರ್ಭ ಮನೆಗೆ ಪ್ರವೇಶಿಸಲು ನಿಖಿಲ್ಗೌಡ ಮುಂದಾಗಿದ್ದಾನಂತೆ. ಆದರೆ ಮನೆ ಮುಂದೆ ಪಹರೆಯಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಆತನನ್ನು ಮನೆಗೆ ಪ್ರವೇಶಿಸದಂತೆ ತಡೆದು ವಾಪಸ್ ಕಳುಹಿಸಿದ್ದಾರೆ ಎನ್ನಲಾಗ್ತಿದೆ.
ನಿಖಿಲ್ ಸದಾ ಎಸ್ಪಿ ಜತೆ ಇರುತ್ತಿದ್ದ, ಹಲವು ಬಾರಿ ಇಲಾಖೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗ್ತಿದೆ.
ನಿಖಿಲ್ ವಿರುದ್ಧ ಪೊಲೀಸ್ ಪೇದೆ ದೂರು?:
ನಿಖಿಲ್ ಗೂಂಡಾಗಿರಿ ವಿರುದ್ಧ ಪೊಲೀಸ್ ಪೇದೆಯೊಬ್ಬರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕರ್ತವ್ಯನಿರತ ಪೇದೆ ಕೊಟ್ಟಿದ್ದ ದೂರಿಗೆ ಯಾವುದೇ ಎಫ್ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂಬ ಮಾಹಿತಿ ಕೂಡ ಇದೆ.