ಕೊಪ್ಪಳ: ಸಿಡಿಲಿಗೆ ಯುವಕ ಬಲಿ, ಮಹಿಳೆ ಸ್ಥಿತಿ ಗಂಭೀರ

author img

By

Published : Oct 1, 2022, 10:02 AM IST

ಸಿಡಿಲು

ಹೊಲದ ಕೆಲಸ ಮುಗಿಸಿ ಮನೆಗೆ ವಾಪಸ್​ ಬರುವಾಗ ಸಿಡಿಲು ಬಡಿದು ಯವಕ ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಬಳಿ ನಡೆದಿದೆ.

ಕೊಪ್ಪಳ: ಸಿಡಿಲಿಗೆ ಯವಕನೋರ್ವ ಬಲಿಯಾಗಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಬಳಿ ನಡೆದಿದೆ.

ಕಾಟ್ರಳ್ಳಿಯ ಕೋಟ್ರೇಶ (23) ಸಾವಿಗೀಡಾಗಿದ್ದು, ಚಿಕ್ಕಸಿಂದೋಗಿಯ ಹನುಮಂತವ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಕಾಟ್ರಳ್ಳಿ ಬಳಿ ಹೊಲದ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್​ ಬರುವಾಗ ಸಿಡಿಲು ಬಡಿದು ಅವಘಡ ಸಂಭವಿಸಿದೆ. ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಇದನ್ನೂ ಓದಿ: ಯಾದಗಿರಿ: ಸಿಡಿಲು ಬಡಿದು ತಾಯಿ ಮಕ್ಕಳಿಬ್ಬರು ಸೇರಿ ನಾಲ್ವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.