ಕೊಪ್ಪಳದಲ್ಲಿ ದಾಖಲಾಯಿತು ತ್ರಿವಳಿ ತಲಾಖ್ ಪ್ರಕರಣ

author img

By

Published : Sep 19, 2022, 9:33 PM IST

Updated : Sep 19, 2022, 10:33 PM IST

triple-talaq-case-registered-in-koppal

ಕೌಟುಂಬಿಕ ವ್ಯಾಜ್ಯಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದ ಪತ್ನಿಗೆ ಷರಿಯತ್​ ಕಾನುನಿನಂತೆ ತಲಾಕ್​ ಹೇಳಿದ್ದ. ಇದಕ್ಕೆ ವಿರುದ್ಧವಾಗಿ ಪತ್ನಿ ತ್ರಿವಳಿ ತಲಾಕ್​ ಕೇಸ್​ ದಾಖಲಿಸಿದ್ದಾರೆ.

ಕೊಪ್ಪಳ: ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೊಟ್ಟಮೊದಲ ತ್ರಿವಳಿ ತಲಾಖ್ ಪ್ರಕರಣ ಸೆಪ್ಟಂಬರ್ 18 ರಂದು ದಾಖಲಾಗಿದೆ. ಗಜೇಂದ್ರಗಡ ಮೂಲದ ಸೈಯದ್ ವಾಹಿದ್ ಅತ್ತರ್​ ವಿರುದ್ಧ ಸೈಯದ್ ಪತ್ನಿ ಖಾಲೀದಾ ಬೇಗಂ ದೂರು ದಾಖಲಿಸಿದ್ದಾರೆ.

ಕೊಪ್ಪಳದಲ್ಲಿ ದಾಖಲಾಯಿತು ತ್ರಿವಳಿ ತಲಾಖ್ ಪ್ರಕರಣ

ಖಾಲೀದಾ ಬೇಗಂ ಹಾಗು ವಾಹಿದ್ ಮಧ್ಯೆ ಕೌಟುಂಬಿಕ ಕಲಹವಿದ್ದ ಹಿನ್ನೆಲೆಯಲ್ಲಿ. 2021 ರಲ್ಲಿ ಕೊಪ್ಪಳ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಆ ವಿಚಾರಣೆ ಹಿನ್ನೆಲೆಯಲ್ಲಿ ನ್ಯಾಯಲಕ್ಕೆ ಆಗಮಿಸಿದಾಗ ಸೆಪ್ಟೆಂಬರ್ 15 ರಂದು ಸೈಯದ್ ವಾಹಿದ್ ಷರಿಯತ್ ಕಾಯ್ದೆ ಅನ್ವಯ ಮೂರು ಬಾರಿ ತಲಾಖ್ ಎಂದು ಹೇಳಿದ್ದಾನೆ.

triple-talaq-case-registered-in-koppal
ಕೊಪ್ಪಳದಲ್ಲಿ ದಾಖಲಾಯಿತು ತ್ರೀವಳಿ ತಲಾಖ್ ಪ್ರಕರಣ

ಈ ಬಗ್ಗೆ ಖಾಲೀದಾ ಬೇಗಂ ಕೋರ್ಟ್​ನಲ್ಲಿ ಹೇಳಿದಾಗ ಕೇಸ್​ ದಾಖಲಿಸಲು ಸಲಹೆ ನೀಡಿದ್ದರು. ಅದರಂತೆ ಬೇಗಂ ಅವರು ಕೊಪ್ಪಳದ ಮಹಿಳಾ ಠಾಣೆಯಲ್ಲಿ ವಳಿ ತಲಾಖ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಬಸ್​ನಿಂದ ಹೊರಗೆಸೆಯಲ್ಪಟ್ಟು ವಿದ್ಯಾರ್ಥಿ ಸಾವು : ಬಸ್​ ಡ್ರೈವರ್, ಕಂಡಕ್ಟರ್ ಬಂಧನ

Last Updated :Sep 19, 2022, 10:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.