ಶಂಕಿತ ಉಗ್ರನ ಜೊತೆ ಸಂಪರ್ಕ ಶಂಕೆ: ಗಂಗಾವತಿಯ ವ್ಯಾಪಾರಿಯನ್ನು ವಾಪಸ್ ಕಳುಹಿಸಿದ ಶಿವಮೊಗ್ಗ ಪೊಲೀಸರು

author img

By

Published : Sep 26, 2022, 6:30 PM IST

Updated : Sep 26, 2022, 10:47 PM IST

ಶಂಕಿತ ಉಗ್ರನ ಜೊತೆ ಸಂಪರ್ಕದ ಶಂಕೆ

ಶಿವಮೊಗ್ಗ ಶಂಕಿತ ಉಗ್ರನ ಜೊತೆ ಸಂಪರ್ಕದ ಅನುಮಾನದ ಮೇರೆಗೆ ಪೊಲೀಸರು ಗಂಗಾವತಿ ಯುವಕನನ್ನು ವಿಚಾರಣೆಗೆ ಒಳಪಡಿಸಿ ಬಳಿಕ ಬಿಟ್ಟು ಕಳುಹಿಸಿದ್ದಾರೆ.

ಗಂಗಾವತಿ : ಶಿವಮೊಗ್ಗ ಶಂಕಿತ ಉಗ್ರರ ಜೊತೆ ಸಂಪರ್ಕ ಹೊಂದಿರುವ ಶಂಕೆ ಮೇಲೆ ಗಂಗಾವತಿಯ ವ್ಯಾಪಾರಿಯನ್ನು ಶಿವಮೊಗ್ಗ ಪೊಲೀಸರು ವಿಚಾರಣೆ ನಡೆಸಿದರು. ಕೆಲ ಮಾಹಿತಿ ಪಡೆದು ಬಳಿಕ ಇಂದು ಸಂಜೆ ಗಂಗಾವತಿ ವ್ಯಾಪಾರಿಯನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ.

ಶಿವಮೊಗ್ಗ ಶಂಕಿತ ಉಗ್ರನ ಜೊತೆ ದೂರವಾಣಿ ಸಂಭಾಷಣೆ ನಡೆಸಿರುವ ಶಂಕೆ ಮೇರೆಗೆ ಶಿವಮೊಗ್ಗದ ಪೊಲೀಸರು ಗಂಗಾವತಿಯ ವ್ಯಾಪಾರಿ ಶಬ್ಬೀರ್ ಮಂಡಲಗಿರಿ ಎಂಬುರನ್ನು ಭಾನುವಾರ ಸಂಜೆ ವಿಚಾರಣೆಗೆ ಕರೆದಿದ್ದರು. ಇಂದು ವಿಚಾರಣೆ ನಡೆಸಿ, ಬಳಿಕ ವಾಪಸ್ ಮನೆಗೆ ಕಳುಹಿಸಿದ್ದಾರೆ.

ಆಕಸ್ಮಿಕವಾಗಿ ಶಂಕಿತ ಜೊತೆ ಮೊಬೈಲ್​ನಲ್ಲಿ ಮಾತನಾಡಿರುವುದಾಗಿ ವಿಚಾರಣೆ ವೇಳೆ ವ್ಯಾಪಾರಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಯಾವುದೇ ದಾಖಲೆಗಳು ದೊರೆಯದ ಹಿನ್ನೆಲೆ ವಿಚಾರಣೆ ನಡೆಸಿ ವ್ಯಾಪಾರಿಯನ್ನು ಬಿಟ್ಟು ಕಳುಹಿಸಿದ್ದಾರೆ. ಜೊತೆಗೆ ಅಗತ್ಯಬಿದ್ದಾಗ ವಿಚಾರಣಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಐಸಿಸ್​ ಭಯೋತ್ಪಾದಕ ಸಂಘಟನೆ ಜೊತೆ ನಂಟು ಶಂಕೆ.. ಗಂಗಾವತಿಯ ಹಣ್ಣಿನ ವ್ಯಾಪಾರಿ ವಶಕ್ಕೆ

Last Updated :Sep 26, 2022, 10:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.