ಬೆತ್ತಲೆ ಪೂಜೆ ಮಾಡಿದ್ರೆ ತಂದೆಯ ಸಾಲ ತೀರುತ್ತೆ: ದುರುಳರ ಮಾತು ನಂಬಿದ ಕೊಪ್ಪಳದ ಬಾಲಕನಿಗೆ ನಗ್ನ ಪೂಜೆ

author img

By

Published : Oct 3, 2022, 11:30 AM IST

ಬಾಲಕನ ಬೆತ್ತಲೆಗೊಳಿಸಿ ಪೂಜೆ

ಬಾಲಕನ ಬೆತ್ತಲೆಗೊಳಿಸಿ ಪೂಜೆ. ಕೊಪ್ಪಳದಲ್ಲಿ ಪ್ರಕರಣ ಬೆಳಕಿಗೆ.

ಕೊಪ್ಪಳ: ಬೆತ್ತಲೆ ಪೂಜೆ ಮಾಡಿದ್ರೆ ತಂದೆಯ ಸಾಲ ತೀರುತ್ತದೆ ಎಂದು ಸುಳ್ಳು ಹೇಳಿ ಬಾಲಕನನ್ನು ಬೆತ್ತಲೆ ಮಾಡಿ ವಿಡಿಯೋ ಮಾಡಿರುವ ಅಮಾನವೀಯ ಘಟನೆ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ನಡೆದಿದೆ. ಹಾಸಗಲ್ ಗ್ರಾಮದ 16 ವರ್ಷದ ಬಾಲಕನನ್ನು ಬೆತ್ತಲೆಗೊಳಿಸಿ ಅವಮಾನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಂದೆ ಮಾಡಿದ್ದ ಸಾಲ ತೀರಬೇಕೆಂದರೇ ನೀನು ಬೆತ್ತಲೆ ಪೂಜೆ ಮಾಡಬೇಕು. ಅದರಿಂದ ದುಡ್ಡು ಬರುತ್ತದೆ. ಮತ್ತೆ ಸಾಲ ಕೂಡ ತೀರುತ್ತದೆ. ಜೊತೆಗೆ ನಿಮ್ಮ ಬಡತನ ನಿವಾರಣೆಯಾಗುತ್ತದೆ ಎಂದು ಬಾಲಕನ ತಲೆ ಕೆಡಿಸಿದ್ದರು. ಅಂತೆಯೇ ಹುಬ್ಬಳ್ಳಿಯ ರೂಮ್ ವೊಂದರಲ್ಲಿ ಬಾಲಕನನ್ನು ಬೆತ್ತಲೆ ಮಾಡಿ, ಪೂಜೆ ಮಾಡುವ ನಾಟಕವಾಡಿದ್ದಾರೆ. ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೃತ್ಯ ಎಸಗಿದ ಆರೋಪಿಗಳನ್ನು ಶರಣಪ್ಪ, ವಿರುಪನಗೌಡ, ಶರಣಪ್ಪ ತಳವರ ಎಂದು ಗುರುತಿಸಲಾಗಿದೆ. ಘಟನೆಯಿಂದ ನೊಂದ ಬಾಲಕ ಮತ್ತು ಕುಟುಂಬಸ್ಥರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

(ಓದಿ: ರೇಪಿಸ್ಟ್​ಗಳಿಂದ ತಪ್ಪಿಸಿಕೊಂಡು ವಿವಸ್ತ್ರವಾಗಿ ಓಡಿದ ಬಾಲಕಿ..ಮೊರಾದಾಬಾದ್​ನಲ್ಲಿ ಹೇಯ ಕೃತ್ಯ ಬೆಳಕಿಗೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.