2 ತಿಂಗಳ ಹಿಂದೆ ಅನಾವರಣಗೊಂಡ ಆಲಂಗೂರು ಶ್ರೀನಿವಾಸ್​ ಪ್ರತಿಮೆಯಲ್ಲಿ ಬಿರುಕು

author img

By

Published : Jun 23, 2022, 8:38 PM IST

statue-of-the-late-alangoor-srinivasa-got-crack

ಕಳೆದ ಎರಡು ತಿಂಗಳುಗಳ ಹಿಂದೆ ಶಾಸಕ ನಾಗೇಶ್‌ರಿಂದ ಅನಾವರಣಗೊಂಡ ದಿವಂಗತ ಆಲಂಗೂರು ಶ್ರೀನಿವಾಸ್​ ಅವರ ಪ್ರತಿಮೆಯಲ್ಲಿ ಬಿರುಕು ಕಾಣಿಸಿದೆ.

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ದಿ.ಆಲಂಗೂರು ಶ್ರೀನಿವಾಸ್ ಅವರು ಜಿಲ್ಲೆಯ ಪ್ರಮುಖ ನಾಯಕರಲ್ಲಿ ಒಬ್ಬರು. ಬಹುದಿನಗಳ ಬೇಡಿಕೆಯ ನಂತರ ಅವರ ಪ್ರತಿಮೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿತ್ತು. ಕಳೆದ ಏಪ್ರಿಲ್‌ನಲ್ಲಿ ಶಾಸಕ ನಾಗೇಶ್ ಪ್ರತಿಮೆ ಅನಾವರಣಗೊಳಿಸಿದ್ದರು. ಆದರೆ, 2 ತಿಂಗಳೊಳಗೆ ಪ್ರತಿಮೆ ಬಿರುಕು ಬಿಟ್ಟಿದ್ದು, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರತ್ಯೇಕತೆ ಮಾತು: ಸಚಿವ ಕತ್ತಿ ಹೇಳಿಕೆಗೆ ಕಾರಜೋಳ ಹೀಗಂದ್ರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.