ಕೋಲಾರ - ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಿಲ್ಲಾಸ್ಪತ್ರೆಯಲ್ಲೇ ಮಾರಾಮಾರಿ..ವಿಡಿಯೋ

author img

By

Published : Oct 18, 2021, 7:00 PM IST

Updated : Oct 18, 2021, 7:17 PM IST

ಎರಡು ಗುಂಪುಗಳ ಮಧ್ಯೆ ಜಿಲ್ಲಾಸ್ಪತ್ರೆಯಲ್ಲೇ ಮಾರಾಮಾರಿ

ಆಸ್ಪತ್ರೆಯಲ್ಲಿ ಎರಡೂ ಗ್ಯಾಂಗ್​ನವರು ಎದುರುಬದುರಾದಾಗ ಮಾತಿಗೆ ಮಾತು ಬೆಳೆದಿದೆ. ಪರಿಣಾಮ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್​ನಲ್ಲಿ ಮತ್ತೆ ಹೊಡೆದಾಟ ಶುರುವಾಗಿದೆ. ಆಸ್ಪತ್ರೆಯಲ್ಲಿದ್ದ ಚೇರು ಟೇಬಲ್​ಗಳು, ಗ್ಲೂಕೋಸ್​ ಸ್ಟಾಂಡ್​ ಗಳಲ್ಲಿ ಹೊಡೆದಾಡಿಕೊಂಡಿದ್ದಾರೆ.

ಕೋಲಾರ : ಎರಡು ಗ್ಯಾಂಗ್​ಗಳು ಹೊಡದಾಡಿಕೊಂಡಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಒಂದು ಏರಿಯಾದ ಎರಡು ಗ್ಯಾಂಗ್​ಗಳ ನಡುವೆ ಆಗಾಗ ನಡೆಯುತ್ತಿದ್ದ ಗಲಾಟೆ ಇವತ್ತು ಕೂಡಾ ಬೈಕ್​ಗಳಲ್ಲಿ ಎದುರುಬದುರಾದಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಕ್ಷಣಾರ್ಧದಲ್ಲೇ ರಸ್ತೆಯಲ್ಲೇ ಮಾರಾಮಾರಿ ನಡೆದಿದ್ದು, ಹಲವರಿಗೆ ಗಾಯಗಳಾಗಿದ್ದವು. ಗಾಯಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು.

ಎರಡು ಗುಂಪುಗಳ ಮಧ್ಯೆ ಜಿಲ್ಲಾಸ್ಪತ್ರೆಯಲ್ಲೇ ಮಾರಾಮಾರಿ

ನಗರದ ಕಠಾರಿಪಾಳ್ಯದ ಗಂಗಾಧರ್​ ಹಾಗೂ ಅಪರಂಜಿ ನಾರಾಯಣಸ್ವಾಮಿ ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಕಠಾರಿಪಾಳ್ಯದ ಪಂಚಣ್ಣನ ಅಂಗಡಿ ಸರ್ಕಲ್​ ಬಳಿ ಗ್ಯಾಂಗ್​ ವಾರ್​ ನಡೆದಿತ್ತು. ಗಂಗಾಧರ್​ ಗ್ಯಾಂಗ್​ನ ಬಾಲು ಹಾಗೂ ಅಮರ್​ ಮತ್ತು ನಾರಾಯಣಸ್ವಾಮಿ ಮಕ್ಕಳಾದ ದಿಲೀಪ್​ ಹಾಗೂ ರಾಜೇಶ್​​ ಇಂದು ಮಧ್ಯಾಹ್ನ ಒಂದೂವರೆ ಗಂಟೆ ಸುಮಾರಿಗೆ ಬೈಕ್​ನಲ್ಲಿ ಎದುರಾಗಿದ್ದಾರೆ.

ಈ ವೇಳೆ ಬೈಕ್​ಗೆ ಬೈಕ್​ ಟಚ್​ ಆಗಿದೆ, ಅದೇ ಕಾರಣ ಇಟ್ಟುಕೊಂಡು ಎರಡೂ ಗುಂಪುಗಳ ನಡುವೆ ನಡು ರಸ್ತೆಯ್ಲಲೇ ಮಾರಾಮರಿ ನಡೆದಿದೆ. ನಂತರ ಎರಡೂ ಗುಂಪಿನ ಐದು ಜನರಿಗೆ ತಲೆ ಹಾಗೂ ಕೈಗೆ ಗಾಯಗಳಾಗಿವೆ. ನಂತರ ಅವರನ್ನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲೂ ಎರಡೂ ಗ್ಯಾಂಗ್​ನವರು ಎದುರುಬದುರಾದಾಗ ಮಾತಿಗೆ ಮಾತು ಬೆಳೆದಿದೆ. ಈ ಪರಿಣಾಮ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್​ನಲ್ಲಿ ಮತ್ತೆ ಹೊಡೆದಾಟ ಶುರುವಾಗಿದೆ.

ಕೈ ಬದಲು ಟೇಬಲ್​​ ಗ್ಲೂಕೋಸ್​ ಸ್ಟ್ಯಾಂಡ್​ಗಳು ಮಾತನಾಡಿದವು

ಆಸ್ಪತ್ರೆಯಲ್ಲಿದ್ದ ಚೇರು ಟೇಬಲ್​ಗಳು, ಗ್ಲೂಕೋಸ್​ ಸ್ಟಾಂಡ್​ ಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಬೆಚ್ಚಿಬಿದ್ದಿದ್ದಾರೆ. ನಂತರ ಅಲ್ಲೇ ಇದ್ದ ಪೊಲೀಸ್​ ಹಾಗೂ ಸೆಕ್ಯೂರಿಟಿ ಸಿಬ್ಬಂದಿ ಆಸ್ಪತ್ರೆಗೆ ಧಾವಿಸಿ ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ಮಾರಾಮಾರಿ

ಅಷ್ಟಕ್ಕೂ ಗಂಗಾಧರ್​ ಹಾಗೂ ನಾರಾಯಣಸ್ವಾಮಿ ಗುಂಪಿನ ನಡುವೆ ಕಳೆದ ಎರಡು ತಿಂಗಳ ಹಿಂದೆಯೂ ಗಲಾಟೆ ನಡೆದಿತ್ತು. ಅದು ಅಂದಿನಿಂದಲೂ ಬೂದಿ ಮುಚ್ಚಿದ ಕೆಂಡದಂತಿತ್ತು. ಆ ಗಲಾಟೆಯಾದ ನಂತರ ಎರಡು ಗ್ಯಾಂಗ್​ನವರ ಎದುರು ಬದುರಾದಾಗಿರಲಿಲ್ಲ. ಆದರೆ ಇಂದು ಅನಿರೀಕ್ಷಿತವಾಗಿ ಎದುರು ಬದುರಾಗಿದ್ದಾರೆ, ಅಷ್ಟೇ ಅಲ್ಲದೇ ಇಬ್ಬರ ಬೈಕ್​ಗಳು ಒಂದಕ್ಕೊಂದು ತಾಕಿವೆ, ಅದೇ ಕಾರಣ ಎರಡು ಗುಂಪುಗಳ ನಡುವೆ ಜಗಳವಾಗಿದೆ.

ಸದ್ಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕೋಲಾರ ನಗರ ಠಾಣಾ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಕಠಾರಿಪಾಳ್ಯದಲ್ಲಿ ಪೊಲೀಸ್​ ಬಂದೋಬಸ್ತ್​ ಹಾಕಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ನಡೆದ ಗಲಾಟೆ ವೇಳೆ ಆಸ್ಪತ್ರೆಯ ಚೇರು ಟೇಬಲ್​ಗಳಿಗೆ ಹಾನಿಯಾಗಿದ್ದು, ಈ ಸಂಬಂಧ ಜಿಲ್ಲಾ ಶಸ್ತ್ರಚಿಕಿತ್ಸಕ ರವಿಕುಮಾರ್​ ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

Last Updated :Oct 18, 2021, 7:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.