'ಸಂವಿಧಾನ ಬಲ್ಲವರಾದ ರಮೇಶ್ ಕುಮಾರ್ ಕಾನೂನಿನ ವಿರುದ್ದವಾಗಿ ನಡೆದುಕೊಂಡಿಲ್ಲ'

author img

By

Published : Aug 30, 2021, 11:01 PM IST

ramesh-kumar

ಇದಕ್ಕೆ ದನಿಗೂಡಿಸಿರುವ ದಲಿತ ಮುಖಂಡರು, ಸಂವಿಧಾನ ಬಲ್ಲವರಾದ ರಮೇಶ್ ಕುಮಾರ್ ಕಾನೂನಿನ ವಿರುದ್ದವಾಗಿ ನಡೆದುಕೊಂಡಿಲ್ಲ. ಅವರ ವಿರುದ್ದ ಪಿತೂರಿ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ..

ಕೋಲಾರ : ಪೊಲೀಸರ ವಿರುದ್ಧ ರಮೇಶ್‌ ಕುಮಾರ್ ಆಕ್ರೋಶ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅವರು ಪೊಲೀಸರೊಂದಿಗೆ ನಡೆದುಕೊಂಡದ್ದನ್ನು ಗಮನಿಸಿ ಪೊಲೀಸ್ ಸಿಬ್ಬಂದಿ ಪತ್ರದ ಮೂಲಕ ಅಸಮಾಧಾನ ಹೊರ ಹಾಕಿದ್ದರು. ಆ ವಿಚಾರಕ್ಕೆ ಸ್ವತಃ ಅವರೇ ಸ್ಪಷ್ಟನೆಯನ್ನೂ ನೀಡಿದ್ದರು. ಇದೀಗ ತಮ್ಮ ನಾಯಕ ರಮೇಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿರುವ ಬೆಂಬಲಿಗರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್​ ಹಾಗೂ ದಲಿತ ಮುಖಂಡರು, ಪೊಲೀಸರಿಂದ ಸಾಕಷ್ಟು ಜನರಿಗೆ ನಿತ್ಯ ಕಿರುಕುಳ ಆಗ್ತಿದೆ. ಆದರೆ, ಯಾವೊಬ್ಬ ಪೊಲೀಸರು ಜನರ ಸಮಸ್ಯೆಗಳ ಬಗ್ಗೆ ಈವರೆಗೂ ಮಾತನಾಡಿಲ್ಲ. ಜನರ ಧ್ವನಿಯಾಗಿ ರಮೇಶ್‍ಕುಮಾರ್ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣ ಮೂಲಕ ನಿಂದನೆ ಮಾಡಲಾಗ್ತಿದೆ ಎಂದು ಕಿಡಿಕಾರಿದ್ದಾರೆ.

ಇದಕ್ಕೆ ದನಿಗೂಡಿಸಿರುವ ದಲಿತ ಮುಖಂಡರು, ಸಂವಿಧಾನ ಬಲ್ಲವರಾದ ರಮೇಶ್ ಕುಮಾರ್ ಕಾನೂನಿನ ವಿರುದ್ದವಾಗಿ ನಡೆದುಕೊಂಡಿಲ್ಲ. ಅವರ ವಿರುದ್ದ ಪಿತೂರಿ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.

ಓದಿ: 'ರೈತರ ಜೊತೆ ಒಂದು ದಿನ' ಕಾರ್ಯಕ್ರಮ ಮುಂದುವರೆಯಲಿದೆ : ಸಚಿವ ಬಿ ಸಿ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.