ಕೋಲಾರ: ಮೆಥೋಡಿಸ್ಟ್ ಚರ್ಚ್ನಲ್ಲಿನ ಗಲಾಟೆ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಭಾನುವಾರ ಕೂಡ ಮೆಥೋಡಿಸ್ಟ್ ಚರ್ಚ್ನ ಬಳಿ ಪಾದ್ರಿ ಶಾಂತಕುಮಾರ್ ಅವರ ಪರ ಹಾಗೂ ವಿರೋಧಿ ಗುಂಪುಗಳ ನಡುವೆ ಪ್ರತಿಭಟನೆ ನಡೆಯಿತು. ಕೋಲಾರ ನಗರದ ಹಳೇ ಬಸ್ ನಿಲ್ದಾಣದ ಬಳಿಯಲ್ಲಿರುವ ಈ ಒಳಗೆ ಪಾದ್ರಿ ಶಾಂತಕುಮಾರ್ರನ್ನು ಪ್ರಾರ್ಥನಾ ಸಭೆ ನಡೆಸಲು ಬಿಡಬಾರದೆಂದು ಆಗ್ರಹಿಸಿ ಪ್ರತಿಭಟಿಸಲಾಯಿತು.
ಆದ್ರೆ ಒಂದು ಗುಂಪು ಶಾಂತ್ಕುಮಾರ್ ಅವರನ್ನು ಎಂದಿನಂತೆ ಚರ್ಚ್ ಒಳಗೆ ಬಿಟ್ಟ ಕಾರಣ, ಅವರ ವಿರೋಧಿ ಗುಂಪು ಚರ್ಚ್ನೊಳಗೆ ಹೋಗದಂತೆ ಹೊರಗೆ ಮರದ ಕೆಳಗೆ ಕುಳಿತು ಪ್ರಾರ್ಥನೆ ಸಲ್ಲಿಸಿತು. ಪಾದ್ರಿ ಶಾಂತ ಕುಮಾರ್ ಮೇಲೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಅವರು ಪಾದ್ರಿ ಸ್ಥಾನ ನಿರ್ವಹಿಸಲು ಅನರ್ಹರು, ಯಾವುದೇ ಕಾರಣಕ್ಕೂ ಪ್ರಾರ್ಥನಾ ಸಭೆಗಳನ್ನು ನಡೆಸಬಾರದು ಎಂದು ಒಂದು ಗುಂಪು ಆಗ್ರಹಿಸಿ ಪ್ರತಿಭಟನೆ ನಡೆಸಿತು.
ಮತ್ತೊಂದು ಗುಂಪು ಅವರು ತಪ್ಪು ಮಾಡಿಲ್ಲ, ಎಂದಿನಂತೆ ಪ್ರಾರ್ಥನಾ ಸಭೆಗಳನ್ನು ನಡೆಸಬೇಕು ಎಂದು ಆಗ್ರಹಿಸಿತು. ಇನ್ನು ಎರಡೂ ಗುಂಪುಗಳ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಹಿನ್ನೆಲೆ ಚರ್ಚ್ ಬಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: ಚರ್ಚ್ಗೆ ಪಾದ್ರಿ ಬಾರದಂತೆ ಪ್ರತಿಭಟನೆ: ವಿರೋಧದ ನಡುವೆಯೂ ಪ್ರಾರ್ಥನೆ