ಮೆಥೋಡಿಸ್ಟ್​ ಚರ್ಚ್​ನಲ್ಲಿ​ ಗಲಾಟೆ: ಪಾದ್ರಿ ಶಾಂತಕುಮಾರ್​ ವಿರುದ್ಧ ಪ್ರತಿಭಟನೆ

author img

By

Published : Oct 2, 2022, 4:32 PM IST

ಪಾದ್ರಿ ಶಾಂತಕುಮಾರ್​ ವಿರುದ್ಧ ಪ್ರತಿಭಟನೆ

ಜಾಮೀನಿನ ಮೇಲೆ ಹೊರ ಬಂದಿರುವ ಪಾದ್ರಿ ಶಾಂತಕುಮಾರ್​ ಭಾನುವಾರದ ಸಭೆಯಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಕೋಲಾರ: ಮೆಥೋಡಿಸ್ಟ್​ ಚರ್ಚ್​ನಲ್ಲಿನ ಗಲಾಟೆ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಭಾನುವಾರ ಕೂಡ ಮೆಥೋಡಿಸ್ಟ್​ ಚರ್ಚ್​ನ ಬಳಿ ಪಾದ್ರಿ ಶಾಂತಕುಮಾರ್​ ಅವರ ಪರ ಹಾಗೂ ವಿರೋಧಿ ಗುಂಪುಗಳ ನಡುವೆ ಪ್ರತಿಭಟನೆ ನಡೆಯಿತು. ಕೋಲಾರ ನಗರದ ಹಳೇ ಬಸ್​ ನಿಲ್ದಾಣದ ಬಳಿಯಲ್ಲಿರುವ ಈ ಒಳಗೆ ಪಾದ್ರಿ ಶಾಂತಕುಮಾರ್​ರನ್ನು ಪ್ರಾರ್ಥನಾ ಸಭೆ ನಡೆಸಲು ಬಿಡಬಾರದೆಂದು ಆಗ್ರಹಿಸಿ ಪ್ರತಿಭಟಿಸಲಾಯಿತು.

ಆದ್ರೆ ಒಂದು ಗುಂಪು ಶಾಂತ್​ಕುಮಾರ್​ ಅವರನ್ನು ಎಂದಿನಂತೆ ಚರ್ಚ್​ ಒಳಗೆ ಬಿಟ್ಟ ಕಾರಣ, ಅವರ ವಿರೋಧಿ ಗುಂಪು ಚರ್ಚ್​ನೊಳಗೆ ಹೋಗದಂತೆ ಹೊರಗೆ ಮರದ ಕೆಳಗೆ ಕುಳಿತು ಪ್ರಾರ್ಥನೆ ಸಲ್ಲಿಸಿತು. ಪಾದ್ರಿ ಶಾಂತ ಕುಮಾರ್ ಮೇಲೆ ಪೊಲೀಸ್​ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಅವರು ಪಾದ್ರಿ ಸ್ಥಾನ ನಿರ್ವಹಿಸಲು ಅನರ್ಹರು, ಯಾವುದೇ ಕಾರಣಕ್ಕೂ ಪ್ರಾರ್ಥನಾ ಸಭೆಗಳನ್ನು ನಡೆಸಬಾರದು ಎಂದು ಒಂದು ಗುಂಪು ಆಗ್ರಹಿಸಿ ಪ್ರತಿಭಟನೆ ನಡೆಸಿತು.

ಪಾದ್ರಿ ಶಾಂತಕುಮಾರ್​ ವಿರುದ್ಧ ಪ್ರತಿಭಟನೆ

ಮತ್ತೊಂದು ಗುಂಪು ಅವರು ತಪ್ಪು ಮಾಡಿಲ್ಲ, ಎಂದಿನಂತೆ ಪ್ರಾರ್ಥನಾ ಸಭೆಗಳನ್ನು ನಡೆಸಬೇಕು ಎಂದು ಆಗ್ರಹಿಸಿತು. ಇನ್ನು ಎರಡೂ ಗುಂಪುಗಳ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಹಿನ್ನೆಲೆ ಚರ್ಚ್​ ಬಳಿಯಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ಚರ್ಚ್​ಗೆ ಪಾದ್ರಿ ಬಾರದಂತೆ ಪ್ರತಿಭಟನೆ: ವಿರೋಧದ ನಡುವೆಯೂ ಪ್ರಾರ್ಥನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.