ಕೆಜಿಎಫ್ ಎಸ್​​ಪಿ ಗನ್​​ಮ್ಯಾನ್ ಮೇಲೆ ಹಲ್ಲೆ: ಐವರು ಅರೆಸ್ಟ್

author img

By

Published : Sep 28, 2021, 9:52 AM IST

ಕೆಜಿಎಫ್ ಎಸ್​​ಪಿ ಗನ್​​ಮ್ಯಾನ್ ಮೇಲೆ ಹಲ್ಲೆ

ಎಸ್​ಪಿಯ ಗನ್​ಮ್ಯಾನ್ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲಾರ: ಕೆಜಿಎಫ್ ಎಸ್​​ಪಿ ಇಲಕ್ಕಿಯಾ ಕರುಣಾಗರನ್ ಗನ್​​​ಮ್ಯಾನ್ ಮುನಿರತ್ನಗೆ ಅಡ್ಡಗಟ್ಟಿ ಹಲ್ಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಣ ದೋಚುವ ಹಿನ್ನೆಲೆ ಆರೋಪಿಗಳು ಹಲ್ಲೆ ಮಾಡಿದ್ದರು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.

ಕಳೆದ ಭಾನುವಾರ ಸಂಜೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಅಜ್ಜಪ್ಪಲ್ಲಿ‌ ಬಳಿ ಕೆಜಿಎಫ್ ಎಸ್​ಪಿಯ ಗನ್​ ಮಾನ್ ಮುನಿರತ್ನ ಕರ್ತವ್ಯ ನಿರ್ವಹಿಸಿ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಬಳಿಕ ಗನ್ ಮ್ಯಾನ್​ನಿಂದ ಮೊಬೈಲ್ ಹಾಗೂ ಹಣ ದೋಚಲು ಯತ್ನಿಸಿದ್ದರು. ಕೆಜಿಎಫ್ ಮೂಲದ ಅವಿನಾಶ್ ರಾಜ್, ಸ್ಯಾಮ್ ಸ್ಟೀಫನ್, ರಂಜಿತ್, ಅಜಯ್, ಪ್ರಕಾಶ್ ಬಂಧಿತ ಆರೋಪಿಗಳು.

ಈ ವೇಳೆ ಮುನಿರತ್ನಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಉರಿಗಾಂ ಠಾಣೆಯಲ್ಲಿ ಗನ್​​ಮ್ಯಾನ್ ಪ್ರಕರಣ ದಾಖಲಿಸಿದ್ದರು.

ಗನ್​ ಮಾನ್ ಮುನಿರತ್ನ
ಗನ್​ ಮಾನ್ ಮುನಿರತ್ನ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.