ಕಲಬುರಗಿ: ದನದ ಕೊಟ್ಟಿಗೆಗೆ ಬೆಂಕಿಯಿಟ್ಟ ಕೀಚಕರು, 24 ಜಾನುವಾರುಗಳಿಗೆ ಗಾಯ

author img

By

Published : Sep 21, 2021, 12:38 PM IST

unknown-people-set-a-fire-to-cattle-shed-in-kalburgi

ದನದ ಕೊಟ್ಟಿಗೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ 24 ಜಾನುವಾರುಗಳಿಗೆ ಸುಟ್ಟ ಗಾಯಗಳಾಗಿವೆ. ಕಲಬುರಗಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಕಲಬುರಗಿ: ದನದ ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಘಟನೆಯಲ್ಲಿ 24 ಜಾನುವಾರುಗಳು ಗಾಯಗೊಂಡಿವೆ.

ಕುಂಚಾವರಂ ಗ್ರಾಮದ ಅಮೃತಮ್ಮ ಬಿಚ್ಚಪ್ಪ ಎಂಬುವರಿಗೆ ಸೇರಿರುವ ದನದ ಕೊಟ್ಟಿಗೆ ಇದಾಗಿದ್ದು, ತಡರಾತ್ರಿ ಕಿಡಿಗೇಡಿಗಳು ಕೊಟ್ಟಿಗೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆ ವೇಳೆ ಕೊಟ್ಟಿಗೆಯಲ್ಲಿ ಸುಮಾರು 30 ಜಾನುವಾರುಗಳಿದ್ದವು, ಎಲ್ಲವನ್ನೂ ರಕ್ಷಿಸಲಾಗಿದೆ.

ದನದ ಕೊಟ್ಟಿಗೆಗೆ ದುಷ್ಕರ್ಮಿಗಳಿಂದ ಬೆಂಕಿ

ಈ ವೇಳೆ 20 ಹಸುಗಳು, 4 ಕರುಗಳು ಸೇರಿದಂತೆ 24 ಜಾನುವಾರುಗಳಿಗೆ ಸುಟ್ಟು ಗಾಯಗಳಾಗಿವೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಗಿದ್ದು, ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಓದಿ: ರಾಣೆಬೆನ್ನೂರು ದುರ್ಗಮ್ಮದೇವಿ ಮಾರುಕಟ್ಟೆಗೆ ಬೆಂಕಿ - ಸುಟ್ಟು ಕರಕಲಾಯ್ತು 100 ಅಂಗಡಿಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.